ಹೈದರಾಬಾದ್: ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ದೊಡ್ಡ ಬಜೆಟ್ನ ಹಾಗೂ ನಿರೀಕ್ಷಿತ ಚಿತ್ರಗಳನ್ನು ಸಂಕ್ರಾಂತಿ ಹಬ್ಬದ ಸೀಸನ್ನಲ್ಲಿ ಬಿಡುಗಡೆ ಮಾಡುವುದು ವಾಡಿಕೆ. ಈ ವರ್ಷವೇ ತೆಗೆದುಕೊಂಡರೆ, ಚಿರಂಜೀವಿ ಅಭಿನಯದ ‘ವಾಲ್ಟರ್ ವೀರಯ್ಯ’ ಮತ್ತು ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ ಚಿತ್ರಗಳಿಗೆ ಹೆದರಿ, ಅದೇ ಸಮಯದಲ್ಲಿ ಬಿಡುಗಡೆಯಾಗಬೇಕಿದ್ದ ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರವನ್ನು ಮುಂದೂಡಲಾಯಿತು.
ಇದನ್ನೂ ಓದಿ: ದಾರಿ ತಪ್ಪಿದ್ದ ರಜನಿಕಾಂತ್ ಬದಲಾಗಿದ್ದು ಯಾರಿಂದ ಗೊತ್ತಾ? ಅವರೇ ಹೇಳಿದ್ದಾರೆ ಕೇಳಿ …
ಮುಂದಿನ ವರ್ಷ ಆ ಸಮಸ್ಯೆಯೇ ಬೇಡ ಎಂದು ತೀರ್ಮಾನಿಸಿರುವ ಟಾಲಿವುಡ್ ಮಂದಿ, ಈಗಿನಿಂದಲೇ ಚಿತ್ರಗಳನ್ನು ಮುಂದಿನ ಸಂಕ್ರಾಂತಿಗೆ ಬಿಡುಗಡೆ ಮಾಡುವುದಕ್ಕೆ ಪ್ಲಾನ್ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ಮಹೇಶ್ ಬಾಬು, ಪ್ರಭಾಸ್, ಅಲ್ಲು ಅರ್ಜುನ್ ಮತ್ತು ರಾಮ್ಚರಣ್ ತೇಜ ಅಭಿನಯದ ಚಿತ್ರಗಳನ್ನು 2024ರ ಸಂಕ್ರಾಂತಿಗೆ ಬಿಡುಗಡೆ ಮಾಡಬೇಕು ಎಂದು ಈಗಿನಿಂದಲೇ ತಯಾರಿ ನಡೆದಿದೆಯಂತೆ ಮತ್ತು ಸದ್ಯದಲ್ಲೇ ಎಲ್ಲ ನಟರು, ತಮ್ಮ ಚಿತ್ರಗಳ ಬಿಡುಗಡೆಯನ್ನು ಘೋಷಣೆ ಮಾಡಲಿದ್ದಾರಂತೆ.
ರಾಮ್ಚರಣ್ ತೇಜ ಅಭಿನಯದ ‘ಆರ್ಸಿ15’, ಮಹೇಶ್ ಬಾಬು ಅಭಿನಯದ ‘ಎಸ್ಎಸ್ಎಂಬಿ28’, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಮತ್ತು ಪ್ರಭಾಸ್ ಅಭಿನಯದ ಹೊಸ ಚಿತ್ರ ಮುಂದಿನ ಸಂಕ್ರಾಂತಿಗೆ ಬಿಡುಗಡೆ ಆಗುವ ಬಗ್ಗೆ ಚರ್ಚೆ ನಡೆದಿದೆಯಂತೆ. ಅಷ್ಟೇ ಅಲ್ಲ, ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಚಿತ್ರಗಳು ಸಹ ಈ ರೇಸ್ ಸೇರಿಕೊಂಡರೆ ಆಶ್ಚರ್ಯವಿಲ್ಲ.
ಇದನ್ನೂ ಓದಿ: ಕಾಲಿವುಡ್ ಎಂಟ್ರಿ ಕುರಿತು ಸ್ಪಷ್ಟನೆ ಕೊಟ್ಟ ರಕ್ಷಿತ್ ಶೆಟ್ಟಿ …
ಹೀಗೆ ಟಾಲಿವುಡ್ನ ಜನಪ್ರಿಯ ನಟರೆಲ್ಲ ಮುಂದಿನ ಸಂಕ್ರಾಂತಿಯಂದು ತಮ್ಮದೊಂದು ಚಿತ್ರ ಬಿಡುಗಡೆ ಮಾಡಿದರೆ ಹೇಗೆ ಎಂಬ ಯೋಚನೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಈ ಪಟ್ಟಿಯಲ್ಲಿ ಇಲ್ಲದಿರುವ ಹೆಸರು ಎಂದರೆ ಅದು ಜ್ಯೂನಿಯರ್ ಎನ್ಟಿಆರ್ ಅವರದ್ದು ಮಾತ್ರ. ಇಷ್ಟು ಜನ ಸ್ಟಾರ್ಗಳು ಒಟ್ಟಿಗೆ ಬಂದರೆ, ತಬ್ಬಿಬ್ಬಾಗೋದು ಪ್ರೇಕ್ಷಕ. ಯಾವ ಚಿತ್ರ ನೋಡುತ್ತಾನೋ, ಯಾವುದನ್ನು ಬಿಡುತ್ತಾನೋ?
‘ಪಠಾಣ್’ ಯಶಸ್ಸು: ಈ ದೇಶ ಯಾವತ್ತೂ ಖಾನ್ಗಳನ್ನು ಪ್ರೀತಿಸುತ್ತಲೇ ಬಂದಿದೆ ಎಂದ ಕಂಗನಾ ರಣಾವತ್