More

    ಮುಂದಿನ ಸಂಕ್ರಾಂತಿಗೆ ಈಗಿನಿಂದಲೇ ಸ್ಪರ್ಧೆ ಶುರು; ಜ್ಯೂ ಎನ್​ಟಿಆರ್​ ಬಿಟ್ಟರೆ ಇನ್ನೆಲ್ಲರೂ ರೇಸ್​ನಲ್ಲಿ …

    ಹೈದರಾಬಾದ್​: ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ದೊಡ್ಡ ಬಜೆಟ್​ನ ಹಾಗೂ ನಿರೀಕ್ಷಿತ ಚಿತ್ರಗಳನ್ನು ಸಂಕ್ರಾಂತಿ ಹಬ್ಬದ ಸೀಸನ್​ನಲ್ಲಿ ಬಿಡುಗಡೆ ಮಾಡುವುದು ವಾಡಿಕೆ. ಈ ವರ್ಷವೇ ತೆಗೆದುಕೊಂಡರೆ, ಚಿರಂಜೀವಿ ಅಭಿನಯದ ‘ವಾಲ್ಟರ್​ ವೀರಯ್ಯ’ ಮತ್ತು ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ಸಿಂಹ ರೆಡ್ಡಿ ಚಿತ್ರಗಳಿಗೆ ಹೆದರಿ, ಅದೇ ಸಮಯದಲ್ಲಿ ಬಿಡುಗಡೆಯಾಗಬೇಕಿದ್ದ ಪ್ರಭಾಸ್​ ಅಭಿನಯದ ‘ಆದಿಪುರುಷ್​’ ಚಿತ್ರವನ್ನು ಮುಂದೂಡಲಾಯಿತು.

    ಇದನ್ನೂ ಓದಿ: ದಾರಿ ತಪ್ಪಿದ್ದ ರಜನಿಕಾಂತ್​ ಬದಲಾಗಿದ್ದು ಯಾರಿಂದ ಗೊತ್ತಾ? ಅವರೇ ಹೇಳಿದ್ದಾರೆ ಕೇಳಿ …

    ಮುಂದಿನ ವರ್ಷ ಆ ಸಮಸ್ಯೆಯೇ ಬೇಡ ಎಂದು ತೀರ್ಮಾನಿಸಿರುವ ಟಾಲಿವುಡ್​ ಮಂದಿ, ಈಗಿನಿಂದಲೇ ಚಿತ್ರಗಳನ್ನು ಮುಂದಿನ ಸಂಕ್ರಾಂತಿಗೆ ಬಿಡುಗಡೆ ಮಾಡುವುದಕ್ಕೆ ಪ್ಲಾನ್​ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ, ಮಹೇಶ್​ ಬಾಬು, ಪ್ರಭಾಸ್​, ಅಲ್ಲು ಅರ್ಜುನ್​ ಮತ್ತು ರಾಮ್​ಚರಣ್​ ತೇಜ ಅಭಿನಯದ ಚಿತ್ರಗಳನ್ನು 2024ರ ಸಂಕ್ರಾಂತಿಗೆ ಬಿಡುಗಡೆ ಮಾಡಬೇಕು ಎಂದು ಈಗಿನಿಂದಲೇ ತಯಾರಿ ನಡೆದಿದೆಯಂತೆ ಮತ್ತು ಸದ್ಯದಲ್ಲೇ ಎಲ್ಲ ನಟರು, ತಮ್ಮ ಚಿತ್ರಗಳ ಬಿಡುಗಡೆಯನ್ನು ಘೋಷಣೆ ಮಾಡಲಿದ್ದಾರಂತೆ.

    ರಾಮ್​ಚರಣ್​ ತೇಜ ಅಭಿನಯದ ‘ಆರ್​ಸಿ15’, ಮಹೇಶ್​ ಬಾಬು ಅಭಿನಯದ ‘ಎಸ್​ಎಸ್​ಎಂಬಿ28’, ಅಲ್ಲು ಅರ್ಜುನ್​ ಅಭಿನಯದ ‘ಪುಷ್ಪ 2’ ಮತ್ತು ಪ್ರಭಾಸ್​ ಅಭಿನಯದ ಹೊಸ ಚಿತ್ರ ಮುಂದಿನ ಸಂಕ್ರಾಂತಿಗೆ ಬಿಡುಗಡೆ ಆಗುವ ಬಗ್ಗೆ ಚರ್ಚೆ ನಡೆದಿದೆಯಂತೆ. ಅಷ್ಟೇ ಅಲ್ಲ, ಚಿರಂಜೀವಿ ಮತ್ತು ಪವನ್​ ಕಲ್ಯಾಣ್​ ಚಿತ್ರಗಳು ಸಹ ಈ ರೇಸ್​ ಸೇರಿಕೊಂಡರೆ ಆಶ್ಚರ್ಯವಿಲ್ಲ.

    ಇದನ್ನೂ ಓದಿ: ಕಾಲಿವುಡ್​ ಎಂಟ್ರಿ ಕುರಿತು ಸ್ಪಷ್ಟನೆ ಕೊಟ್ಟ ರಕ್ಷಿತ್​ ಶೆಟ್ಟಿ …

    ಹೀಗೆ ಟಾಲಿವುಡ್​ನ ಜನಪ್ರಿಯ ನಟರೆಲ್ಲ ಮುಂದಿನ ಸಂಕ್ರಾಂತಿಯಂದು ತಮ್ಮದೊಂದು ಚಿತ್ರ ಬಿಡುಗಡೆ ಮಾಡಿದರೆ ಹೇಗೆ ಎಂಬ ಯೋಚನೆಯಲ್ಲಿ ಪ್ರಯತ್ನ ನಡೆಸಿದ್ದಾರೆ. ಈ ಪಟ್ಟಿಯಲ್ಲಿ ಇಲ್ಲದಿರುವ ಹೆಸರು ಎಂದರೆ ಅದು ಜ್ಯೂನಿಯರ್​ ಎನ್​ಟಿಆರ್​ ಅವರದ್ದು ಮಾತ್ರ. ಇಷ್ಟು ಜನ ಸ್ಟಾರ್​ಗಳು ಒಟ್ಟಿಗೆ ಬಂದರೆ, ತಬ್ಬಿಬ್ಬಾಗೋದು ಪ್ರೇಕ್ಷಕ. ಯಾವ ಚಿತ್ರ ನೋಡುತ್ತಾನೋ, ಯಾವುದನ್ನು ಬಿಡುತ್ತಾನೋ?

    ‘ಪಠಾಣ್​’ ಯಶಸ್ಸು: ಈ ದೇಶ ಯಾವತ್ತೂ ಖಾನ್​ಗಳನ್ನು ಪ್ರೀತಿಸುತ್ತಲೇ ಬಂದಿದೆ ಎಂದ ಕಂಗನಾ ರಣಾವತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts