ಬೆಂಗಳೂರು: ನಿನ್ನೆ (ಮೇ.04) ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯದಲ್ಲಿ ಫಾಫ್ ಪಡೆ 4 ವಿಕೆಟ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಹೆಚ್ಚಿನ ಅಂತರದಲ್ಲಿ ಶುಭಮನ್ ಗಿಲ್ ಪಡೆಯನ್ನು ಮಣಿಸಿದ ಆರ್ಸಿಬಿಗೆ ಇದೊಂದೇ ಒಂದು ಪಂದ್ಯದಿಂದ ಅಧಿಕ ಅಂಕಗಳು ಲಭಿಸಿತು. ಇದರ ಸಹಾಯದಿಂದ ಸದ್ಯ ಪಾಯಿಂಟ್ಸ್ ಟೇಬಲ್ನಲ್ಲಿ ಆರ್ಸಿಬಿ 7ನೇ ಸ್ಥಾನವನ್ನು ಅಲಂಕರಿಸುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ: ಬಿಹಾರ: ಪೆರೋಲ್ ಮೇಲೆ ಜೈಲಿನಿಂದ ಹೊರಬಂದು ಜೆಡಿಯು ಅಭ್ಯರ್ಥಿ ಪರ ಮತಯಾಚನೆ
ಒಂದೆಡೆ ಆರ್ಸಿಬಿ ಫ್ಯಾನ್ಸ್ಗಳ ಸಂಭ್ರಮಕ್ಕೆ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಾರಣರಾದರೆ, ಮತ್ತೊಂದೆಡೆ ಮಾಜಿ ಕ್ರಿಕೆಟಿಗರು ಹಾಗೂ ಕಾಮೆಂಟ್ರಿ ಮಾಡುವವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ, ಕಳೆದ ಪಂದ್ಯದಲ್ಲಿ ಕೊಹ್ಲಿ ನೀಡಿದ ಹೇಳಿಕೆ, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಟೀಂ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, ವಿರಾಟ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ತನ್ನ ಸ್ಟ್ರೈಕ್ ರೇಟ್ ಕುರಿತು ಕೇಳಲಾದ ಪ್ರಶ್ನೆಗೆ ಮುಖಕ್ಕೆ ಹೊಡೆದ ರೀತಿಯಲ್ಲಿ ಉತ್ತರಿಸಿದ್ದ ಕಿಂಗ್ ಕೊಹ್ಲಿ, “ನನ್ನ ಸ್ಟ್ರೈಕ್ ರೇಟ್ ಕುರಿತು ಕೆಲವರು ಅಲ್ಲಿ ಕುಳಿತು ಮಾತನಾಡಲು ಅರ್ಹರಿಲ್ಲ. ಅದರಲ್ಲೂ ಅವರು ನಮ್ಮ ಸ್ಥಾನದಲ್ಲಿ ಇದ್ದಿದ್ದರೇ, ಹೀಗೆ ಮಾತನಾಡುತ್ತಿರಲಿಲ್ಲ. ಆಗ ಬಹುಶಃ ಅವರಿಗೂ ತಿಳಿದಿರುತ್ತಿತ್ತು” ಎಂದು ಹೇಳಿದ್ದರು. ಇನ್ನೂ ‘ರನ್ ಮಷಿನ್’ನ ಈ ಹೇಳಿಕೆಗೆ ನಿನ್ನೆಯ ಪಂದ್ಯ ಆರಂಭಕ್ಕೂ ಮುನ್ನ ಪ್ರತಿಕ್ರಿಯಿಸಿದ ಗವಾಸ್ಕರ್, ಕೊಟ್ಟ ತಿರುಗೇಟು ಹೀಗಿದೆ.
ಇದನ್ನೂ ಓದಿ: ಮಕ್ಕಳ ಭವಿಷ್ಯಕ್ಕಾಗಿ ಕಾಂಗ್ರೆಸ್-ಸಮಾಜವಾದಿ ಪಕ್ಷದ ನಾಯಕರ ಸ್ಪರ್ಧೆ: ಪ್ರಧಾನಿ ಮೋದಿ
“ನಾವೆಲ್ಲರೂ ತುಂಬ ಅಲ್ಲದೇ ಹೋದರು ಅಲ್ಪ-ಸ್ವಲ್ಪವಾದರು ಕ್ರಿಕೆಟ್ ಆಡಿದ್ದೇವೆ. ನಾವು ಕಾಮೆಂಟ್ರಿ ಮಾಡುವವರು ಯಾವುದೇ ಅಜೆಂಡಾಗಳನ್ನು ಇಟ್ಟುಕೊಂಡಿರುವುದಿಲ್ಲ, ನಮಗೆ ಮುಂದೆ ಏನು ಕಾಣಿಸುತ್ತದೋ ಅದನ್ನು ಮಾತ್ರ ಹೇಳ್ತೇವೆ. ನಮಗೆ ಅವರು ಇಷ್ಟ, ಇವರು ಇಷ್ಟವಿಲ್ಲ ಎಂಬ ಯಾವುದೇ ಉದ್ದೇಶಗಳು ಇರುವುದಿಲ್ಲ. ಅಷ್ಟಕ್ಕೂ ಅದೆಲ್ಲಾ ಇದ್ದರೂ ಸಹ ಅಲ್ಲಿ ಏನು ನಡೆಯುತ್ತಿದೆ ಅದನ್ನು ಹೇಳುವುದು ಮಾತ್ರ ನಮಗೆ ಗೊತ್ತಿದೆ” ಎಂದು ವಿರಾಟ್ ಹೇಳಿಕೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).
5 ರೂ. ಪಾರ್ಲೆ-ಜಿ ಬಿಸ್ಕತ್ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!
ಈತ ಕ್ರೀಸ್ಗೆ ಬಂದ್ರೆ ಬೌಲರ್ಗಳೇ ಬೆವರುತ್ತಾರೆ! ಅಜಯ್ ಜಡೇಜಾ ಹೆಸರಿಸಿದ ಸ್ಟಾರ್ ಬ್ಯಾಟ್ಸ್ಮನ್ ಇವರೇ