ಕೊಲ್ಕತ: ತೃಣಮೂಲ ಕಾಂಗ್ರೆಸ್ನ ಮುಂಚಿನ ಅವಧಿಯ ಸರ್ಕಾರವಿದ್ದಾಗ ಪಶ್ಚಿಮ ಬಂಗಾಳದಲ್ಲಿ ನಡೆಯಿತೆನ್ನಲಾದ ದೊಡ್ಡ ಪ್ರಮಾಣದ ಕಲ್ಲಿದ್ದಲು ಕಳ್ಳಸಾಗಣೆ, ಸಾಗಾಣಿಕೆ ಮತ್ತು ಭ್ರಷ್ಟಾಚಾರದ ಪ್ರಕರಣದ ಪ್ರಮುಖ ಆರೋಪಿ ಬಿಕಾಶ್ ಮಿಶ್ರನನ್ನು ಸಿಬಿಐ ವಶಪಡಿಸಿಕೊಂಡಿದೆ.
ಟಿಎಂಸಿ ಯೂತ್ ವಿಂಗ್ ನಾಯಕ ಬಿನಯ್ ಮಿಶ್ರ ಅವರ ಸೋದರನಾದ ಬಿಕಾಶ್ ಮಿಶ್ರ ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಕತಾದ ಖಾಸಗಿ ಆಸ್ಪತ್ರೆಯೊಂದರಿಂದ ಸಿಬಿಐ ಅಧಿಕಾರಿಗಳು ಇಂದು ಅವನನ್ನು ಬಂಧಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಪ್ರಕರಣದಲ್ಲಿ ಅದಾಗಲೇ ಬಿನಯ್ ಮಿಶ್ರನನ್ನು ಬಂಧಿಸಿದ್ದು, ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯನಾದ ಅಭಿಷೇಕ್ ಬ್ಯಾನರ್ಜಿ ಅವರನ್ನೂ ಸಿಬಿಐ ವಿಚಾರಣೆ ಮಾಡಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಬಿದ್ದಿದ್ದು ಯಾಕೆ? ಕಾರಣ ತಿಳಿಸಿದ ವಾಯುಪಡೆ ಮಾಜಿ ಅಧಿಕಾರಿ!
ಪ್ರಕರಣದ ವಿವರ: ಬಂಗಾಳದ ಕುನುಸ್ತೊರಿಯಾ ಮತ್ತು ಕಜೋರಿಯದಲ್ಲಿರುವ ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್ಗೆ ಸೇರಿದ ಕಲ್ಲಿದ್ದಲು ಕ್ಷೇತ್ರಗಳಲ್ಲಿ ಕಲ್ಲಿದ್ದಲಿನ ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಳವಿನ ಬಗೆಗೆ ಕಳೆದ ವರ್ಷ ನವೆಂಬರ್ನಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. ಕಲ್ಲಿದ್ದಲು ಮಾಫಿಯಾದವರು ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದ ನಾಯಕರಿಗೆ ನಿಯಮಿತವಾಗಿ ಲಂಚ ನೀಡುತ್ತಿರುವ ಆರೋಪ ಈ ಪ್ರಕರಣದಲ್ಲಿದೆ. ಈ ಹಣವನ್ನು ಪಕ್ಷದ ಯುವ ನಾಯಕ ಬಿನಯ್ ಮಿಶ್ರಾ ಮೂಲಕ ಚಾನಲ್ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಬಿನಯ್ ಮಿಶ್ರರ ಸೋದರ ಬಿಜಯ್ ಮಿಶ್ರ ವಿರುದ್ಧವೂ ಸಿಬಿಐ ಜಾಮೀನುರಹಿತ ವಾರೆಂಟ್ ಜಾರಿ ಮಾಡಿತ್ತು ಎನ್ನಲಾಗಿದೆ. (ಏಜೆನ್ಸೀಸ್)
ಶಾಲೆಯಲ್ಲಿ ಮೊಟ್ಟೆ: ಜೀವನಶೈಲಿ ಬದಲಿಸುವ ಕೆಲಸ ಬೇಡ ಎಂದ ಪೇಜಾವರ ಶ್ರೀಗಳು
ಮನೆ ಕಡೆಗೆ ಮಣ್ಣಿನ ಮಕ್ಕಳು! ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತ ಪ್ರತಿಭಟನೆಗೆ ಬಿತ್ತು ತೆರೆ