ಬೆಂಗಳೂರು: ನಮ್ಮ ಜೀವಿತಾವಧಿಯಲ್ಲಿ ಪರಿಸರ ಬಹಳಷ್ಟು ಪರಿಸರ ಹಾನಿಯಾಗಿದೆ. ಹೀಗಾದರೆ ನಮ್ಮ ಪೂರ್ವಜರ ಕಾಡು ಎಷ್ಟು ವಿಸ್ತಾರ ಆಗಿದ್ದಿರಬಹುದು ಯೋಚಿಸಿ. ಪರಿಸರ ಮಾಲಿನ್ಯಕ್ಕೆ ಮನುಷ್ಯರೇ ಪ್ರಮುಖ ಕಾರಣ. ನಮ್ಮಿಂದಾಗಿಯೇ ಪೃಕೃತಿ ಹಾಳಾಗುತ್ತಿರುವುದರಿಂದ ಅದರ ಸಂರಕ್ಷಣೆ ಕೂಡ ಮನುಷ್ಯರೇ ಮಾಡಬೇಕು. ಪರಿಸರ ತನ್ನನ್ನು ತಾನೇ ಸಂರಕ್ಷಿಸಿಕೊಳ್ಳುತ್ತದೆ. ಆದರೆ ನಾವು ಈಗ ಪರಿಸರ ಸಂರಕ್ಷಣೆ ಮಾಡಿಕೊಳ್ಳಬೇಕಾದ್ದು ಬೇರೆ ಯಾರಿಗಾಗಿಯೋ ಅಲ್ಲ, ನಮಗಾಗಿಯೇ ಎಂದು ಪರಿಸರ ಪ್ರೇಮಿ ಡಾ.ಎಸ್.ವಿ. ನರಸಿಂಹನ್ ಅಭಿಪ್ರಾಯಪಟ್ಟಿದ್ದಾರೆ.
ಮಾತ್ರವಲ್ಲ ಒಂದುವೇಳೆ ಪ್ರಕೃತಿವಿಕೋಪ ಸಂಭವಿಸಿ ಭೂಮಿಯಲ್ಲಿ ವಿನಾಶ ಆಗುವುದಿದ್ದರೆ ಅದರಲ್ಲಿ ಮೊದಲಿಗರು ಮನುಷ್ಯರೇ ಆಗಿರುತ್ತಾರೆ. ಹೀಗಾಗಿ ನಾವೇ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾದ್ದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜೈಲಲ್ಲಿರುವ ಗೆಳೆಯನ ನೋಡಲು ಬಂದು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ; ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕೊಲೆ ಆರೋಪಿಯ ಬಂಧನ
ಅ. 2ರಿಂದ 8 ವನ್ಯಜೀವಿ ಸಪ್ತಾಹ, ಅ. 4ರಂದು ವನ್ಯಪ್ರಾಣಿ ದಿನ ಇರುವುದರಿಂದ ವಿಜಯವಾಣಿ ಕ್ಲಬ್ ವನ್ಯಜೀವಿ ಸಂಕುಲ ಕುರಿತ ಸಂವಾದ ಏರ್ಪಡಿಸಿದ್ದು, ವನ್ಯಜೀವಿ ತಜ್ಞರಾದ ಸಂಜಯ್ ಗುಬ್ಬಿ, ಜೋಸೆಫ್ ಹೂವರ್, ಕೇಶವಮೂರ್ತಿ, ಬಾಲಚಂದ್ರ ಸಾಯಿಮನೆ, ಡಾ. ಎಸ್.ವಿ. ನರಸಿಂಹನ್, ನಟೇಶ್ ಬಂಡೀಪುರ, ನಳಿನಿ ಬಿ. ಗೌಡ, ಸುನೀಲ್ ಬಾರ್ಕೂರ್ ತಂತಮ್ಮ ಅನಿಸಿಕೆ-ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಸಂವಾದಕ್ಕೆ ಸೇರಿಕೊಂಡು ವಿಷಯ ತಿಳಿಯಲು, ಮಾತನಾಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
https://www.clubhouse.com/join/vijayavani/u2NKM6Kl/xVrEDdX0
ಬಾಡಿಗೆದಾರನೊಂದಿಗಿನ ಗಲಾಟೆಯಲ್ಲಿ ‘ಬಾಡಿ’ಯಾದ ಮನೆ ಮಾಲೀಕ; ತಲೆಗೆ ಪೆಟ್ಟು ಬಿದ್ದು ಸಾವು…