ಚಿತ್ರದುರ್ಗ: ಕುಡಿದ ಅಮಲಿನಲ್ಲಿ ಪಾಪಿ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಅಮಾನವೀಯ ಘಟನೆ ಮೊಳಕಾಲ್ಮೂರು ಪಟ್ಟಣದ ಮಾರುತಿ ಬಡಾವಣೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ರತ್ನಮ್ಮ (45) ಕೊಲೆಯಾದ ಮಹಿಳೆ. ಲೋಕೇಶ್ (25) ಕೊಲೆ ಮಾಡಿದ ಮಗ. ಆರೋಪಿ ಲೋಕೇಶ್ ರತ್ನಮ್ಮನ ಒಬ್ಬನೇ ಮಗ. ಆರೋಪಿ ಮದ್ಯದ ದಾಸನಾಗಿದ್ದ. ರತ್ನಮ್ಮ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಮದ್ಯ ಸೇವನೆಗೆ ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದ. ಹಣ ನೀಡದ್ದಕ್ಕೆ ಕುಡಿದ ಅಮಲಿನಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೊಳಕಾಲ್ಮೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)
ಮಹಿಳೆಯ ಸೀರೆ ಎಳೆದ ಪ್ರಕರಣಕ್ಕೆ ಟ್ವಿಸ್ಟ್: ಬಿಜೆಪಿ ಕಾರ್ಯಕರ್ತರ ವಿರುದ್ಧವೇ ದೂರು ದಾಖಲು
ಜೆಡಿಎಸ್ನಲ್ಲಿ ಬಕೆಟ್ ಹಿಡಿಯುವವರಿಗಷ್ಟೆ ಮಣೆ… ಜೆಡಿಎಸ್ನ ರಾಜ್ಯ ಉಪಾಧ್ಯಕ್ಷ ಪ್ರದೀಪಗೌಡ ರಾಜೀನಾಮೆ
ಎಲ್ಲರಿಗೂ ನಾನು ಪ್ರಾಮಾಣಿಕಳಾಗಿರುತ್ತೇನೆ: ಮದ್ವೆ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ನಟಿ ತಾಪ್ಸಿ ಪನ್ನು!