More

    ಬೃಂದಾವನ್​ ಫಾರ್ಮ್​ನತ್ತ ಚಿರು ಅಂತಿಮ ಪ್ರಯಾಣ

    ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ಅವರ ಅಂತಿಮ ಸಂಸ್ಕಾರ ಕನಕಪುರ ರಸ್ತೆಯಲ್ಲಿರುವ ನೆಲಗುಳಿಯ ಧ್ರುವ ಸರ್ಜಾ ಅವರ ಬೃಂದಾವನ ಫಾರ್ಮ್​ ಹೌಸ್​ನಲ್ಲಿ ನಡೆಯಲಿದೆ. ಇದೀಗ ಬೃಂದಾವನ ಫಾರ್ಮ್​ನತ್ತ ಚಿರು ಅವರ ಪಾರ್ಥೀವ ಶರೀರವನ್ನು ಕೊಂಡಯ್ಯಲಾಗುತ್ತಿದೆ.

    ಇದನ್ನೂ ಓದಿ: ಚಿರು-ಚೈತನ್ಯ ಹೊಸ ದಾಖಲೆ ಮಾಡಿದ್ದರು!

    ಚಿರು ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯಲ್ಲಿ ಕೊಂಡಯ್ಯಲಾಗುತ್ತಿದ್ದು, ಅವರ ಅಂತಿಮ ದರ್ಶನ ಪಡೆಯುವುದಕ್ಕೆ ಜನ ರಸ್ತೆಯ ಎರಡೂ ಕಡೆಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಇನ್ನು ಚಿರಂಜೀವಿ ಅವರ ಹಲವು ಅಭಿಮಾನಿಗಳು ಸಹ ಪಾರ್ಥೀವ ಶರೀರ ಇರುವ ವ್ಯಾನ್​ ಜತೆಗೆ ಪ್ರಯಾಣ ಮಾಡುತ್ತಿದ್ದಾರೆ.

    ಚಿರಂಜೀವಿ ಅವರ ಅಂತ್ಯಕ್ರಿಯೆಗೆ ಸಾರ್ವಜನಕರಿಗೆ ಪ್ರವೇಶ ನಿರ್ಬಂಧ ಮಾಡಲಾಗಿದೆ. ಕುಟುಂಬವರ್ಗದವರು, ಮಾಧ್ಯಮಗಳು, ಗಣ್ಯರನ್ನು ಹೊರತುಪಡಿಸಿ ಮಿಕ್ಕಂತೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಇನ್ನು ಈ ಪ್ರದೇಶವು ರಾಮನಾಗರ ಜಿಲ್ಲೆ ವ್ಯಾಪ್ತಿಗೆ ಬರಲಿದ್ದು, ರಾಮನಗರದ ಪೊಲೀಸರು ಸೂಕ್ತ ಬ್ಯಾರಿಕೇಡ್​ಗಳನ್ನು ಹಾಕಿ ಬಂದೋಬಸ್ತ್​ ಮಾಡಿದ್ದಾರೆ.

    ಇದನ್ನೂ ಓದಿ: ಚಿರು ಸಾವು ಕಂಡು ನಿನ್ನೆಯಿಂದ ಹುಚ್ಚನಂತಾಗಿರುವೆ: ಜಗ್ಗೇಶ್​

    ಈಗಾಗಲೇ, ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವ ಕುಟುಂಬಸ್ಥರು ಹಾಗೂ ಗಣ್ಯರಿಗಾಗಿ ಪೆಂಡಲ್ ವ್ಯವಸ್ಥೆ ಮಾಡಲಾಗ್ತಿದೆ. ಮಿಕ್ಕಂತೆ ಫಾರ್ಮ್ ಹೌಸ್ನ ಒಳ ಭಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಎಂಟು ಜನ ಕೆಲಸಗಾರರು ಗುಂಡಿ ತೆಗೆಯುವ ಕೆಲಸದಲ್ಲಿ ತೊಡಗಿದ್ದಾರೆ.

    VIDEO| ಚಿರು ಲಾಸ್ಟ್ ಟಿಕ್​ಟಾಕ್​ ಇದು; ನಿಧನದ ಬಳಿಕ ಫಾಲೋವರ್ಸ್ ದ್ವಿಗುಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts