More

    ಬಣ್ಣದ ಲೋಕಕ್ಕೆ ಚಿರು ಪುತ್ರ ರಾಯನ್ ರಾಜ್ ಸರ್ಜಾ ಎಂಟ್ರಿ!

    ಅಗಲಿದ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆ ಸಿನಿಮಾ ರಾಜಮಾರ್ತಾಂಡ ರಿಲೀಸ್ ಗೆ ಸಜ್ಜಾಗಿದೆ. ಸಿನಿಮಾ ಬಿಡುಗಡೆ ಹಿನ್ನಲೆ, ಚಿತ್ರತಂಡ ಹೊಸಕೆರೆಹಳ್ಳಿಯಲ್ಲಿರೋ ಶ್ರೀ ವರಸಿದ್ದಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಗಣಹೋಮ ಮಾಡಿಸಿತು.

    ನಿರ್ದೇಶಕ ರಾಮ್ ನಾರಾಯಣ್, ನಿರ್ಮಾಪಕ ಶಿವಕುಮಾರ್ ಅವರ ಚಿತ್ರದ ವಿಶೇಷ ಪೂಜೆಗೆ ಬಂದು ಚಿತ್ರ ತಂಡಕ್ಕೆ ಸುಂದರ್ ರಾಜ್ ಶುಭಕೋರಿದರು. ಅಳಿಯ ಚಿರು ಸಿನಿಮಾ ಗೆಲ್ಲಬೇಕು, ಸಿನಿಮಾ ಗೆದ್ರೆ ಚಿರು ಆತ್ಮಕ್ಕೆ ಶಾಂತಿ ಸಿಗುತ್ತೆ ಎಂದರು.

    ವಿಶೇಷವಾಗಿ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಚಿರು ಪುತ್ರ ರಾಯನ್ ರಾಜ್ ಸರ್ಜಾ ಎಂಟ್ರಿಯಾಗಿದ್ದಾರೆ. ಅಪ್ಪನ ಕೊನೆ ಚಿತ್ರ ರಾಜಮಾರ್ತಾಂಡ ಸಿನಿಮಾದಲ್ಲಿ ರಾಯನ್ ಕಾಣಿಸಿಕೊಳ್ಳಲಿದ್ದಾನೆ. ಬಿಗ್ ಸ್ಕ್ರೀನ್ ಮೇಲೆ ರಾಯನ್ ಹೇಗೆ ಕಾಣ್ತಾನೆ ಅನ್ನೋ ಕೂತೂಹಲ ಎಲ್ಲರಲ್ಲಿ ಮೂಡಿದ್ದು, ಮೇ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ಲ್ಯಾನ್ ಮಾಡಲಾಗಿದೆ.

    ಹರ್ಷ ಹತ್ಯೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts