ನವದೆಹಲಿ: ಚೀನಾದ ರಾಯಭಾರ ಕಚೇರಿ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಕೊಟ್ಟ 1.45 ಕೋಟಿ ರೂಪಾಯಿ ದೇಣಿಗೆಯನ್ನು ಅಂಗವಿಕಲರ ಕಲ್ಯಾಣಕ್ಕೆ ಮತ್ತು ಭಾರತ-ಚೀನಾ ಸಂಬಂಧ ಕುರಿತ ಅಧ್ಯಯನಕ್ಕಾಗಿ ಬಳಸಲಾಗಿದೆ ಎಂದು ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಶನಿವಾರ ಸ್ಪಷ್ಟಪಡಿಸಿದ್ದಾರೆ.
ಲಡಾಖ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದೊಂದಿಗೆ ಕಾಂಗ್ರೆಸ್ ನಿಕಟ ಸಂಬಂಧ ಹೊಂದಿದೆ. ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಅಧ್ಯಯನ ನಡೆಸಿದ್ದಕ್ಕಾಗಿ 2005-06ನೇ ಸಾಲಿನಲ್ಲಿ ಚೀನಾ ರಾಯಭಾರ ಕಚೇರಿ ಸೋನಿಯಾ ಗಾಂಧಿ ಅಧ್ಯಕ್ಷತೆಯ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಭಾರಿ ಮೊತ್ತದ ದೇಣಿಗೆ ನೀಡಿತ್ತು. ಅಲ್ಲದೆ, ಪ್ರಧಾನಿ ಪರಿಹಾರ ನಿಧಿಯಿಂದ ಭಾರಿ ಮೊತ್ತವನ್ನು ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ವರ್ಗಾಯಿಸಲಾಗಿತ್ತು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದರು. ಈ ಆರೋಪಗಳಿಗೆ ಸುರ್ಜೇವಾಲಾ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ನಿವಾಸದ ಮೇಲೆ ಇ.ಡಿ.ರೇಡ್; ಅಧಿಕಾರಿಗಳಿಂದ ವಿಚಾರಣೆ
ಪ್ರಧಾನಿ ಪರಿಹಾರ ನಿಧಿಯಿಂದ ವರ್ಗಾವಣೆ ಆಗಿದ್ದ 20 ಲಕ್ಷ ರೂ.ಗಳನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿನ ಸುನಾಮಿ ಪರಿಹಾರ ಕಾರ್ಯಗಳಿಗಾಗಿ ಬಳಸಲಾಗಿದೆ ಎಂದು ತಿಳಿಸಿದರು.
ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಬಂದ ದೇಣಿಗೆಯ ಪ್ರತಿಯೊಂದು ಪೈಸೆಗೂ ಲೆಕ್ಕ ಕೊಡಲಾಗಿದೆ. ವಿದೇಶಿ ವಿನಿಯಮ ಕಾಯ್ದಯನ್ವಯ ದೇಣಿಗೆ ವಿವರಗಳನ್ನು ಸಲ್ಲಿಸಲಾಗಿದೆ. ಅಲ್ಲದೆ, ಸಲ್ಲಿಸಲಾದ ಆದಾಯ ತೆರಿಗೆ ವಿವರಗಳಲ್ಲೂ ಇದನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
ಇಷ್ಟದ ತಿಂಡಿ, ಜಿಟಿಜಿಟಿ ಮಳೆ ಮತ್ತು ಕಲ್ಪನಾ; ನಟಿ ಹರಿಪ್ರಿಯಾ ಬಾಲ್ಯ ಹೀಗಿತ್ತು..