ಚಿಕ್ಕೋಡಿ: ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಅಥಣಿ ತಾಲೂಕಿನಲ್ಲಿ ಮಹಾಮಾರಿ ಕರೊನಾ ವೈರಸ್ ಹಬ್ಬುವ ಭೀತಿ ಸಾರ್ವಜನಿಕರಲ್ಲಿ ಹೆಚ್ಚಾಗಿದೆ.
ಇದನ್ನೂ ಓದಿ: ಆಗ್ರಾದಲ್ಲಿ ಒಣಗಿದ್ದ ಸೌದೆ ಸಾಗಿಸಲು ಪಿಪಿಇ ಕಿಟ್ಗಳ ಬಳಕೆ!
ಹೊರಗಿನಿಂದ ಬಂದವರನ್ನು ಮುಂಜಾಗ್ರತಾ ಕ್ರಮವಾಗಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇಡಲಾಗುತ್ತದೆ. ಹೀಗಾಗಿ ಅವರಿಗೆ ಅಳಿಸಲಾಗದ ಕ್ವಾರಂಟೈನ್ ಮುದ್ರೆಯನ್ನು ಕೈಗೆ ಹಾಕಲಾಗುತ್ತದೆ. ಆದರೆ, ಅಥಣಿ ತಾಲೂಕು ಆಸ್ಪತ್ರೆಯ ಕ್ವಾರಂಟೈನ್ ಇಂಕ್ ಕಂಡು ಸಾರ್ವಜನಿಕರು ಗಾಬರಿಗೊಂಡಿದ್ದಾರೆ.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ನಟನೆಯ ಗುಲಾಬೋ ಸಿತಾಬೋ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಗೆ ಸಿದ್ಧತೆ
ಹೌದು, ಅಥಣಿಯಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಇಲ್ಲದೆ, ಹೋಮ್ ಕ್ವಾರಂಟೈನ್ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮುದ್ರೆ ಹಾಕುತ್ತಿದ್ದಾರೆ. ಆದರೆ, ಮುದ್ರೆ ಒತ್ತಿದ ಕ್ಷಣದಲ್ಲೇ ಕೈಯಲ್ಲಿದ್ದ ಇಂಕ್ ಅಳಿಸಿ ಹೋಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮನೆಯಲ್ಲಿ ಉಳಿಯಬೇಕಾದ ಮಂದಿ ಇದೀಗ ಬೇಕಾಬಿಟ್ಟಿ ಅಲೆಯುತ್ತಿದ್ದು, ಕರೊನಾ ಭೀತಿಗೆ ಕಾರಣವಾಗಿದೆ. (ದಿಗ್ವಿಜಯ ನ್ಯೂಸ್)
ಅಥಣಿಯಲ್ಲಿ ಕ್ವಾರಂಟೈನ್ ಇಂಕ್ ಕಂಡು ಕಂಗಾಲಾದ ಜನ
ಅಥಣಿಯಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಇಲ್ಲದೆ, ಹೋಮ್ ಕ್ವಾರಂಟೈನ್ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮುದ್ರೆ ಹಾಕುತ್ತಿದ್ದಾರೆ. ಆದರೆ, ಮುದ್ರೆ ಒತ್ತಿದ ಕ್ಷಣದಲ್ಲೇ ಕೈಯಲ್ಲಿದ್ದ ಇಂಕ್ ಅಳಿಸಿ ಹೋಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮನೆಯಲ್ಲಿ ಉಳಿಯಬೇಕಾದ ಮಂದಿ ಇದೀಗ ಬೇಕಾಬಿಟ್ಟಿ ಅಲೆಯುತ್ತಿದ್ದು, ಕರೊನಾ ಭೀತಿಗೆ ಕಾರಣವಾಗಿದೆ.
Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಮೇ 13, 2020