ಚಿಕ್ಕಬಳ್ಳಾಪುರ: ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಆತನ ಬಾಮೈದನ ಮೇಲೆ ಹಲ್ಲೆ ಮಾಡಿರುವ ಘಟನೆ ಚೀಡಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚೀಡಚಿಕ್ಕನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ತಮ್ಮೇಗೌಡ ಅಲಿಯಾಸ್ ರೆಡ್ಡಿ ಹಾಗೂ ಆತನ ಬಾಮೈದ ಮಂಜುನಾಥ್ ಮೇಲೆ ಹಲ್ಲೆ ಅದೇ ಗ್ರಾಮದ ಮರಿಯಪ್ಪನ ಮಗ ಚಾಣುಕ್ಯ ಹಾಗೂ ಸ್ನೇಹಿತರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹಾಲಿನ ಡೈರಿ ಬಳಿ ನಿಂತಿದ್ದ ವೇಳೆ ಬಾವ-ಬಾಮೈದನ ಮೇಲೆ ಹಲ್ಲೆ ಮಾಡಲಾಗಿದೆ. ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಇಸ್ರೆಲ್ನಿಂದ ಕದನ ವಿರಾಮ ಘೋಷಣೆ: ಹಮಾಸ್-ಇಸ್ರೇಲ್ ನಡುವೆ ಒಪ್ಪಂದ ಆರಂಭ, ಗಾಜಾದಲ್ಲಿ ಸಂಭ್ರಮಾಚರಣೆ
ಭಾರತ-ಕಿವೀಸ್ ನಡುವಿನ ಟೆಸ್ಟ್ ವಿಶ್ವಕಪ್ ಫೈನಲ್ ವೀಕ್ಷಿಸಲು ಪ್ರೇಕ್ಷಕರಿಗೆ ಪ್ರವೇಶ
ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಶೆಫಾಲಿಗೆ ಬಡ್ತಿ, ಕನ್ನಡತಿ ವೇದಾಗೆ ನಿರಾಸೆ