ರಾಯ್ಪುರ್(ಛತ್ತೀಸ್ಗಢ): ಇಲ್ಲಿನ ಕಾಂಗ್ರೆಸ್ ಸರ್ಕಾರದ ಸಚಿವರೊಬ್ಬರು ಕರೊನಾ ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿದ್ದಲ್ಲದೆ, ಬೇಜವಬ್ದಾರಿ ಹೇಳಿಕೆ ನೀಡಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ.
ಛತ್ತೀಸ್ಗಢದ ವಾಣಿಜ್ಯ ತೆರಿಗೆ(ಅಬಕಾರಿ), ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕವಾಸಿ ಲಖಮ ಅವರು ರಾಯ್ಪುರದಿಂದ ರಾಯ್ಗಢದ ದೇವಮಾನವರೊಬ್ಬರ ಆಶ್ರಮಕ್ಕೆ ಭೇಟಿ ನೀಡಲು ಸುಮಾರು 250 ಕಿ.ಮೀ ದೂರವನ್ನು ಬೆಂಗಾವಲು ವಾಹನದೊಂದಿಗೆ ತೆರಳುವ ಮೂಲಕ ಲಾಕ್ಡೌನ್ ನಿಯಮ ಉಲ್ಲಂಘಿಸಿದರು.
ತನ್ನ ಹಾದಿಯಲ್ಲಿ ಮೂರು ಜಿಲ್ಲೆಗಳನ್ನು ಹಾದುಹೋದ ಲಖಮ ರಾಯಗಢದಲ್ಲಿರುವ ಬಾಬಾ ಸತ್ಯಾನಾರಾಯಣ್ ಅವರ ಕೊಸಮ್ನರಾ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ, ರಾಯ್ಪುರ್ದಲ್ಲಿ ಸುಮ್ಮನೇ ಕೂತು… ಕೂತು… ಬೇಜಾರಾಯಿತು. ಹೀಗಾಗಿ ರಾತ್ರಿ ನಾನೇ ಪ್ಲಾನ್ ಮಾಡಿಕೊಂಡು ರಾಯ್ಗಢಕ್ಕೆ ಬಂದೆ ಎಂದು ಬೇಜವಬ್ದಾರಿ ಹೇಳಿಕೆ ನೀಡಿದ್ದಾರೆ.
ಭೇಟಿಯ ವೇಳೆ ಇಡೀ ಬೆಂಗಾವಲು ವಾಹನ ಸಚಿವರನ್ನು ಹಿಂಬಾಲಿಸಿತ್ತು. ಮಾಸ್ಕ್ ಧರಿಸಿದೆಯೂ ಓಡಾಡಿ ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದರು. ಭೇಟಿ ಮುಗಿದ ಬಳಿಕ ಥ್ರೀ ಸ್ಟಾರ್ ಹೋಟೆಲ್ನಲ್ಲಿ ಸಚಿವರು ಉಳಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಛತ್ತೀಸ್ಗಢದಲ್ಲಿ ಕರೊನಾ ಸೋಂಕಿತರ ಸಂಖ್ಯೆ 36 ಇದೆ. ಇವರಲ್ಲಿ 24 ಮಂದಿ ಇಲ್ಲಿಯವರೆಗೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ. (ಏಜೆನ್ಸೀಸ್)
ನಿಖಿಲ್-ರೇವತಿ ಮದುವೆ ಕುರಿತ ಪರ-ವಿರೋಧ ಚರ್ಚೆಯ ನಡುವೆಯೇ ಒಡಿಶಾದಲ್ಲಿ ನಡೆಯಿತ್ತೊಂದು ಲಾಕ್ಡೌನ್ ಮಾದರಿ ವಿವಾಹ!
ಕ್ಯಾನ್ಸರ್ ಪೀಡಿತ 8 ವರ್ಷದ ಮಗುವಿಗೆ ಸಕಾಲದಲ್ಲಿ ಔಷಧ ತಲುಪಿಸಿ ಮಾನವೀಯತೆ ಮೆರೆದ ಭಾರತೀಯ ಪೋಸ್ಟ್