ಬೆಂಗಳೂರು: ಇ ಕಾಮರ್ಸ್ ಉದ್ಯಮದಲ್ಲಿ 2.30 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡ ಸೈಬರ್ ಕಳ್ಳರು ಉಡುಗೊರೆ ಕೊಡುವುದಾಗಿ ನಂಬಿಸಿ, 5 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೂಡಿ ನಿವಾಸಿ ಪ್ರತಿಕ್ (23) ಹಣ ಕಳೆದುಕೊಂಡವರು. ಈತ ಕೊಟ್ಟ ದೂರಿನ ಮೇರೆಗೆ ಆರೋಪಿ ಮುನ್ನಿ ದೇವಿ ಎಂಬಾಕೆಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ವೈಟ್ಫೀಲ್ಡ್ ಉಪ ವಿಭಾಗ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರತಿಕ್ ಮೊಬೈಲ್ಗೆ ಕರೆ ಮಾಡಿದ ಮಹಿಳೆ, ಇ ಕಾಮರ್ಸ್ ಕಂಪನಿ ಈಝಿಬೈಟೈಮ್.ಕಾಂ ಕಂಪನಿಯಿಂದ ಕರೆ ಮಾಡುತ್ತಿದ್ದೇನೆ. ಇ-ಕಾಮರ್ಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಆಕರ್ಷಕ ಲಾಭಾಂಶ ಮತ್ತು ಉಡುಗೊರೆ ಕೊಡುವುದಾಗಿ ನಂಬಿಸಿ ಆರಂಭದಲ್ಲಿ 2.30 ಲಕ್ಷ ರೂ. ಅನ್ನು ಆನ್ಲೈನ್ನಲ್ಲಿ ಹೂಡಿಕೆ ಮಾಡಿಸಿಕೊಂಡಿದ್ದರು. ಇದಾದ ಮೇಲೆ ನಿಮ್ಮ ಹೆಸರಿಗೆ ಟಿವಿ ಗಿಫ್ಟ್ ಬಂದಿದೆ. ಅದನ್ನು ಪಡೆಯಲು 6 ಸಾವಿರ ರೂ. ಪಾವತಿ ಮಾಡಬೇಕೆಂದು ಪ್ರತಿಕ್ಗೆ ಹೇಳಿದ್ದಾರೆ. ಇದನ್ನೂ ನಂಬಿದ ಪ್ರತಿಕ್, 6 ಸಾವಿರ ರೂ. ವರ್ಗಾವಣೆ ಮಾಡಿದ್ದರು. ಆದರೆ, ಟಿವಿ ಮಾತ್ರ ಕೈ ಸೇರಲಿಲ್ಲ. ಆಗ ಪ್ರತಿಕ್, ನಾನು ಹೂಡಿಕೆ ಮಾಡಿರುವ ಹಣವನ್ನು ವಾಪಸ್ ಪಡೆಯುವುದಾಗಿ ಕೇಳಿಕೊಂಡಿದ್ದಾರೆ. ಅದಕ್ಕೆ ವಂಚಕಿ, ನೀವು ಹೂಡಿಕೆ ಮಾಡಿರುವ ಹಣ ದುಪ್ಪಟ್ಟು ಆಗಿದೆ. 5 ಲಕ್ಷ ರೂ. ಪಾವತಿ ಮಾಡಿದರೆ ಸಂಪೂರ್ಣ ಹಣವನ್ನು ವಾಪಸ್ ಕೊಡುವುದಾಗಿ ಷರತ್ತು ವಿಧಿಸಿದ್ದಾರೆ.
ದಿಕ್ಕು ತೋಚದ ಪ್ರತಿಕ್, ಸ್ನೇಹಿತರ ಬಳಿ ಸಾಲ ಪಡೆದು 5 ಲಕ್ಷ ರೂಪಾಯಿಯನ್ನು ಆರೋಪಿಗಳು ಹೇಳಿದ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಆದರೆ, ಹೂಡಿಕೆ ಹಣ ಮಾತ್ರ ವಾಪಸ್ ಬರಲಿಲ್ಲ. ಮೊಬೈಲ್ ನಂಬರ್ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ದಿಕ್ಕು ತೋಚದೆ ಠಾಣೆಗೆ ಬಂದು ದೂರು ನೀಡಿದ್ದಾರೆ. ಇದರ ಅನ್ವಯ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿಗೇ ಲವ್ ಲೆಟರ್ ಬರೆದ ಶಿಕ್ಷಕ! ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಕೊಟ್ಟ ಗ್ರಾಮಸ್ಥರು
ವಿದ್ಯಾರ್ಥಿನಿಗೇ ಲವ್ ಲೆಟರ್ ಬರೆದ ಶಿಕ್ಷಕ! ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಕೊಟ್ಟ ಗ್ರಾಮಸ್ಥರು
ಬಾಸ್ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್