ಡೆಹ್ರಾಡೂನ್: ಹಿಮಾಲಯದ ಮಡಿಲಿನಲ್ಲಿರುವ ನಾಲ್ಕು ಪುಣ್ಯ ಕ್ಷೇತ್ರಗಳ ಯಾತ್ರೆಯಾದ ‘ಚಾರ್ ಧಾಮ್ ಯಾತ್ರೆ’ಗೆ ಉತ್ತರಾಖಂಡ ಸರ್ಕಾರ ಇಂದು ಹೊಸ ಎಸ್ಒಪಿ ಜಾರಿಗೊಳಿಸಿದೆ. ನೋಂದಣಿ ಮತ್ತು ಈ-ಪಾಸ್ಗಳೊಂದಿಗೆ ಕೇದಾರನಾಥ, ಬದರೀನಾಥ, ಗಂತೋತ್ರಿ ಮತ್ತು ಯಮುನೋತ್ರಿ ದೇವಾಲಯಗಳಿಗೆ ಭೇಟಿ ನೀಡಲು ಯಾತ್ರಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಚಾರ್ ಧಾಮ್ ಯಾತ್ರೆಗೆ ತೆರಳಲಿಚ್ಛಿಸುವವರು ಎರಡೂ ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಹೊಂದಿರಬೇಕು ಅಥವಾ 72 ಗಂಟೆಗಳೊಳಗೆ ಪಡೆದಿರುವ ಕೋವಿಡ್ ನೆಗೆಟೀವ್ ರಿಪೋರ್ಟ್ ಹೊಂದಿರಬೇಕು. ಯಾತ್ರಾರ್ಥಿಗಳು ಅಗತ್ಯ ದಾಖಲೆಗಳನ್ನು ಹೊಂದಿರುವುದನ್ನು ತಪಾಸಣೆ ಮಾಡಲು ಚಮೋಲಿ, ರುದ್ರಪ್ರಯಾಗ್ ಮತ್ತು ಉತ್ತರಕಾಶಿ ಜಿಲ್ಲೆಗಳಲ್ಲಿ ಚೆಕ್ಪೋಸ್ಟ್ಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕರೊನಾ ಹಿನ್ನೆಲೆಯಲ್ಲಿ ಈ ನಾಲ್ಕು ಕ್ಷೇತ್ರಗಳಿಗೆ ಪ್ರತಿದಿನ ಭೇಟಿ ನೀಡಬಲ್ಲ ಭಕ್ತರ ಸಂಖ್ಯೆ ಮೇಲೆ ಈ ಮುನ್ನ ವಿಧಿಸಲಾಗಿದ್ದ ಮಿತಿಯನ್ನು ಉತ್ತರಾಖಂಡ ಹೈಕೋರ್ಟ್ ಮಂಗಳವಾರದಂದು ತೆರವುಗೊಳಿಸಿತ್ತು. ಈವರೆಗೆ ಬದರೀನಾಥಕ್ಕೆ ದಿನವೊಂದಕ್ಕೆ 1,000, ಕೇದಾರನಾಥಕ್ಕೆ 800, ಗಂಗೋತ್ರಿಗೆ 600 ಮತ್ತು ಯಮುನೋತ್ರಿಗೆ 400 ಯಾತ್ರಿಗಳಿಗೆ ಮಾತ್ರ ಪ್ರವೇಶಾವಕಾಶ ಇತ್ತು. ಇನ್ನು ಮುಂದೆ ಆ ರೀತಿಯ ಯಾವುದೇ ನಿರ್ಬಂಧ ಇರುವುದಿಲ್ಲ. (ಏಜೆನ್ಸೀಸ್)
ತುಂಬಾ ಹೊತ್ತು ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುತ್ತೀರಾ? ಹಾಗಿದ್ರೆ, ಈ ಉಪಯುಕ್ತ ಆಸನಗಳನ್ನು ಮಾಡಿ