More

    ಕರೊನಾ ಎದುರಿಸುವ ಜಾಣ್ಮೆ ಬೆಳೆಸಿಕೊಳ್ಳಲು ಸಲಹೆ

    ಚನ್ನಗಿರಿ: ಕರೊನಾಕ್ಕೆ ಹೆದರಿ ಕೂರುವ ಬದಲು ಅದನ್ನು ಎದುರಿಸಿ ಬದುಕು ಸಾಗಿಸುವ ಜಾಣ್ಮೆ ಬೆಳೆಸಿಕೊಳ್ಳಬೇಕೆಂದು ಕ್ರೆಡಿಟ್ ಆಕ್ಸಿಸ್ ವಲಯ ವ್ಯವಸ್ಥಾಪಕ ಕೆ.ಕೆ.ರಂಗನಾಥ್ ತಿಳಿಸಿದರು.

    ಪುರಸಭೆ ಸಮುದಾಯ ಭವನದಲ್ಲಿ ಗುರುವಾರ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಸವತಿಯಿಂದ ಪುರಸಭೆ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಿಸಿ ಮಾತನಾಡಿದರು.

    ಕರೊನಾ ವಿರುದ್ಧದ ಹೋರಾಟದಲ್ಲಿ ಪೊಲೀಸ್, ಆರೋಗ್ಯ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಪಟ್ಟಣದ ಶುಚಿತ್ವ ಕಾಪಾಡುವ ಪೌರಕಾರ್ಮಿಕರಿಗೆ ಪ್ರೀತಿ ತೋರಬೇಕು ಎಂದರು.

    ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಐಗೂರು, ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಶಾಖಾ ವ್ಯವಸ್ಥಾಪಕ ದೀಲಿಪ್ ಕುಮಾರ್, ಪಿಎಸ್‌ಐ ಜಗದೀಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts