More

    ಚಂದ್ರಯಾನ-3 ಕುರಿತು ವಿಜ್ಞಾನಿ ಸುಧೀಂದ್ರ ಬಿಂದಗಿ ಅವರಿಂದ ಉಪನ್ಯಾಸ

    ಗದಗ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಚಂದ್ರಯಾನ-3 ಯಶಸ್ವಿಯು ದೇಶದ 140 ಕೋಟಿ ಭಾರತೀಯರ ಇಚ್ಛೆ ಈಡೇರಿದಂತಾಗಿದೆ. ಈ ಯಶಸ್ವಿಯು ಭಾರತವನ್ನು ಇತಿಹಾಸದ ಪುಟಗಳಲ್ಲಿ  ಅಜರಾಮರವಾಗಿಸಿದೆ ಎಂದು ವಿಜ್ಞಾನಿ ಸುಧೀಂದ್ರಬಿಂದಗಿ ನುಡಿದರು.

    ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಶನಿವಾರ ಏರ್ಪಡಿಸಿದ ಚಂದ್ರಯಾನ-3 ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತದ ಪ್ರತಿಯೊಂದು ತಾಯಿಯು ತನ್ನ ಮಗು ಅಳುತ್ತಿದ್ದರೆ ಆ ಮಗುವನ್ನು ಆಕಾಶಕ್ಕೆ ಮುಖ ಮಾಡಿ ಚಂದಿರನನ್ನು  ತೋರಿಸಿ ಚಂದ ಮಾಮನ ನೋಡು ಅಂತ ತಾಯಿ ಮಗುವಿಗೆ ಹೇಳುತ್ತಾಳೆ. ತಲೆತಲಾಂತರದಿಂದಲೂ ಚಂದ್ರನೊಂದಿಗೆ ಭಾರತೀಯರು ಅವಿನಾಭಾವ ಸಂಬಂಧ ಹೊಂದಿದೆ. ನಮ್ಮ ಭಾರತದ ವಿಜ್ಞಾನಿಗಳು ಚಂದ್ರನ ಮೇಲೆ ಭಾರತದ ಬಾವುಟವನ್ನು ಹಾರಿಸುವುದರ ಮೂಲಕ ಜಗತ್ತಿಗೆ ಭಾರತದ ವಿಜ್ಞಾನಿಗಳು ಶಕ್ತಿ ಎಂತಹದು ಎಂದು ಜಗತ್ತಿಗೆ  ಪರಿಚಯಿಸಿದೆ.

    ಚಂದ್ರನ ಮೇಲೆ ವಿಕ್ರಮ ಲ್ಯಾಂಡ್ ಆಗುವವರೆಗೂ ಭಾರತದ ಜನರು ದೇವರ ಬಳಿ ಪ್ರಾರ್ಥನೆ ಮಾಡಿದನ್ನು ನಾವು ಸಹ ನೋಡಿದ್ದೆವೆ. ನಂಬಿದ ದೇವರು ಎಂದು ನಮ್ಮನು ಕೈ ಬಿಡಲಾರ, ಎಂತಹುದೆ ಕೆಲಸಗಳು ಇರಲಿ ಆತ್ಮ ವಿಶ್ವಾಸ ಮುಖ್ಯ ಎಂದಿಗೂ ಸಹ ಧÀೃತಿಕೆಡಬಾರದು ಎಂದು ಹೇಳಿದರು.

    ಚಂದ್ರಯಾನ 3 ರ ವಿಕ್ರಮ ಲ್ಯಾಂಡರನ ಕೊನೆಯ ಇಪ್ಪತ್ತು ನಿಮಿಷ ಬಾಕಿ ಇರುವ ಸಂದೇಶ ಭಾರತದ 140 ಕೋಟಿ ಜನರ ನಿದ್ರೆಯನ್ನು ಮಾಡಲು ಸಹ ಬಿಡಲಾರದ ಹಾಗೇ ಮಾಡಿತು, ಕೊನೆಯಲ್ಲಿ ಆ ದೈವ ಬಲ ಹಾಗೂ ವಿಜ್ಞಾನ ತಂತ್ರಜ್ಞಾನ  ಎಲ್ಲರ ಕನಸನ್ನು ನನಸು ಮಾಡಿತು. ಭೂಮಿಯ ಸುತ್ತ ಸುತ್ತಲೂ ಚಂದ್ರನಿಗೆ 15 ದಿನಗಳ ಕಾಲ ಬೇಕು ಅಂತದರಲ್ಲಿ ನಮ್ಮ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಚಂದ್ರನ ಮೇಲೆ ವಿಕ್ರಮ ಲ್ಯಾಂಡರ್ ಸುಗಮವಾಗಿ ಕಾಲಿಡಲು ಹಗಲು ರಾತ್ರಿ ಶ್ರಮಪಟ್ಟಿದ್ದಾರೆ ಎಂದು ತಿಳಿಸಿದರು.

    ಚಂದ್ರಯಾನದ ಮೇಲೆ ರಷ್ಯಾ ತುದಿಗಾಳಲ್ಲಿ ನಿಂತಿತ್ತು ಆದರೆ ವಿಪರ್ಯಾಸವೆಂದರೆ ಲ್ಯಾಂಡ ಆಗುವ ಸಮಯದಲ್ಲಿ ಲ್ಯಾಂಡ್ ರ ಚಿದ್ರವಾಗಿ ಪತ್ತೆ ಸಿಗದ ಹಾಗೇ ಹೋಗಿದೆ. ಜಗತ್ತಿನ ದೊಡ್ಡಣ್ಣ ಅಮೇರಿಕವು ಸಹ ಚಂದ್ರನ ಮೇಲೆ ಕಾಲಿಡಳು ಕನಸನ್ನು ಕಂಡಿತ್ತು ಆದರೆ ಯಾವುದೇ ಫಲಕಾರಿಯಾಗಲಿಲ್ಲ. ಭಾರತ 2014 ರಲ್ಲಿ ಚಂದ್ರಯಾನ 2 ಯಶಸ್ವಿಗೆ ತುದಿಗಾಲಲ್ಲಿ ನಿಂತಿತ್ತು ಆದರೆ  ಫಲಕಾರಿಯಾಗಲಿಲ್ಲ. ನಂತರ ದೇಶ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಸಂಸ್ಥೆಯ ವಿಜ್ಞಾನಿಗಳಿಗೆ ಪೆÇ್ರೀತ್ಸಾಹಿಸಿದರು. ಆಗಸ್ಟ್ 25 ರಂದು ಯಶಸ್ವಿಯಾಗಿ ಜಗತ್ತಿಗೆ ಭಾರತದ ವಿಜ್ಞಾನಗಳ ಸಾಮರ್ಥ್ಯ ಎಂತಹದು ಎಂದು ತಿಳಿಸಿದರು.

    ಚಂದ್ರಯಾನ-3ರ ಯಶಸ್ವಿಗಾಗಿ ಸುರ್ದೀರ್ಘ ನಾಲ್ಕು ವರ್ಷಗಳ ಕಾಲ ನಿರಂತರ ಶ್ರಮವಹಿಸಿ ಅತ್ಯಾಧುನಿಕ ತಾಂತ್ರಿಕ ಯಂತ್ರಗಳ ಸಹಾಯದಿಂದ ತಯಾರಿಸಿ ಉಪಗ್ರಹವನ್ನು ಶ್ರೀ ಹರಿಕೋಟಾದಿಂದ ಉಡಾವಣೆ ಮಾಡಲಾಯಿತು. ಈ ಚಂದ್ರಯಾನ-3ರ ವಿಕ್ರಮ ಬಾಹ್ಯಾಕಾಶವನ್ನು ಐದ ಲಕ್ಷ ಕಿ.ಮೀ. ದೂರದಿಂದ ವಿಜ್ಞಾನಿಗಳು ಇಲ್ಲಿಯೇ ಕುಳಿತು ನಿಯಂತ್ರಿಣ ಮಾಡುವುದು ಸೇರಿದಂತೆ ಎಲ್ಲ ತರಹದ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು ಎಂದರು.

    ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ರಾಜ್ಯ ಸರ್ಕಾರವು ಚಂದ್ರಯಾನ ಪ್ರಯೋಗಕ್ಕಾಗಿ ಸಾವಿರ ಎಕರೆ ಜಮೀನನ್ನು ನೀಡಿತ್ತು. ಆ ಜಮೀನಿನಲ್ಲಿ ಚಂದ್ರನಲ್ಲಿರುವ ವಾತಾವರಣವನ್ನು ನಿರ್ಮಿಸಿ ಮೊದಲು ಪ್ರಯೋಗ ಮಾಡಿ ನಂತರ ಚಂದ್ರಯಾನ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಚಂದ್ರಯಾನ ಉಪಗ್ರಹ ಉಡಾವಣೆಯಲ್ಲಿ ಕರ್ನಾಟಕ ಸರ್ಕಾರದ ಪಾತ್ರವು ಅಪಾರವಾಗಿದೆ ಎಂದು ಸ್ಮರಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದ್ದಕ್ಕಣನವರ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಎ ರಡ್ಡೇರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಮಣಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇಸ್ರೋ ಸಂಸ್ಥೆಯ ವಿಜ್ಞಾನಿ ಸುಧೀಂದ್ರ ಬಿಂದಗಿ ದಂಪತಿಗಳಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts