ಬೆಂಗಳೂರು: ಬಿಗ್ಬಾಸ್ ಸೀಸನ್ 8ರ ನಾಲ್ಕನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಚಂದ್ರಕಲಾ ಮೋಹನ್ ಭಾನುವಾರ ಮನೆಯಿಂದ ಹೊರಬಂದಿದ್ದಾರೆ. ವಿಶೇಷ ಏನೆಂದರೆ ಮನೆಯ ಕ್ಯಾಪ್ಟನ್ ಅರವಿಂದ್ ಅವರನ್ನು ಹೊರತುಪಡಿಸಿ ಇನ್ನುಳಿದ 13 ಸ್ಪರ್ಧಿಗಳನ್ನು ಸ್ವತಃ ಬಿಗ್ಬಾಸ್ ನಾಮಿನೇಟ್ ಮಾಡಿದ್ದರು. ಆ 13 ಜನರಲ್ಲಿ ಕಳಪೆ ಪ್ರದರ್ಶನ, ಸೀನಿಯಾರಿಟಿ ಹಿನ್ನೆಲೆಯಲ್ಲಿಯೂ ಒಂದಷ್ಟು ಹಿನ್ನೆಡೆ ಅನುಭವಿಸಿದ್ದ ಚಂದ್ರಕಲಾ ಎಲಿಮಿನೇಟ್ ಆಗಿದ್ದಾರೆ.
ಮನೆಯವರೊಂದಿಗೆ ಚೆನ್ನಾಗಿ ಬೆರೆಯುವುದಿಲ್ಲ ಎಂಬ ಮಾತನ್ನೂ ಸ್ಪರ್ಧಿಗಳೇ ಸಾಕಷ್ಟು ಬಾರಿ ಮಾತನಾಡಿಕೊಂಡಿದ್ದರು. ಆ ಅಂಶವೂ ಅವರ ಎಲಿಮಿನೇಷನ್ಗೆ ಕಾರಣವಾದಂತಿದೆ. 13 ಸ್ಪರ್ಧಿಗಳ ಪೈಕಿ ಚಂದ್ರಕಲಾ, ಪ್ರಶಾಂತ್ ಸಂಬರಗಿ, ವಿಶ್ವನಾಥ್, ಶಂಕರ್ ಅಶ್ವತ್ಥ, ಶಮಂತ್ ಗೌಡ ಹೊರತುಪಡಿಸಿ ಉಳಿದವರು ಶನಿವಾರವೇ ಸೇಫ್ ಆಗಿದ್ದರು.
ಮದುವೆಗೆ ಹೊರಟಿದ್ದವರ ಮರಣ: ಭೀಕರ ಅಪಘಾತದಲ್ಲಿ ಬಾಲಕಿಯರಿಬ್ಬರು ಸ್ಥಳದಲ್ಲೇ ಸಾವು; 10ಕ್ಕೂ ಅಧಿಕ ಮಂದಿಗೆ ಗಾಯ