More

    Chanakya Niti: ಈ 5 ವಿಷಯಗಳನ್ನು ಹೆಂಡತಿಗೆ ಹೇಳಬಾರದು…ಒಂದು ವೇಳೆ ಹೇಳಿದರೆ ನಿಮ್ಮ ಸಂಬಂಧ ಮುರಿದು ಬೀಳಬಹುದು!

    ಬೆಂಗಳೂರು: ಅರ್ಥಶಾಸ್ತ್ರ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನ ಸುಖಮಯವಾಗಿರಲು ಹಲವು ಕ್ರಮಗಳ ಬಗ್ಗೆ ಹೇಳಿದ್ದಾರೆ. ತಮ್ಮ ಧರ್ಮಗ್ರಂಥಗಳಲ್ಲಿ ಪ್ರೀತಿ, ಸಂಬಂಧ, ಉದ್ಯೋಗ, ವೃತ್ತಿ ಮತ್ತು ಗೌರವ ಮುಂತಾದ ಎಲ್ಲಾ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಪತಿ-ಪತ್ನಿ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಕೊಳ್ಳಬೇಕಾದರೆ ಪರಸ್ಪರರ ಭಾವನೆಗಳನ್ನು ಗೌರವಿಸಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಅಲ್ಲದೆ ಸಂಬಂಧವನ್ನು ಹಾಳುಮಾಡುವ 5 ವಿಷಯಗಳನ್ನು ಹೊರತುಪಡಿಸಿ ಎಲ್ಲವನ್ನೂ ಪತ್ನಿಯೊಂದಿಗೆ ಹಂಚಿಕೊಳ್ಳಲು ತಿಳಿಸಿದ್ದಾರೆ.

    ಹಾಗಾದರೆ ಹೆಂಡತಿಯರಿಗೆ ತಿಳಿಯಬಾರದ ಆ 5 ವಿಷಯಗಳ ಬಗ್ಗೆ ಇಂದು ತಿಳಿದುಕೊಳ್ಳೋಣ. ಆಚಾರ್ಯ ಚಾಣಕ್ಯರ ಪ್ರಕಾರ ಆ 5 ವಿಷಯಗಳು ಯಾವುವು?, ಜೊತೆಗೆ ಆ ಬಗ್ಗೆ ಹೆಂಡತಿಯರು ತಿಳಿದುಕೊಂಡರೆ ನಿಮ್ಮ ಸಂಬಂಧವೂ ಹಾಳಾಗಬಹುದು ಎನ್ನುವುದನ್ನು ತಿಳಿಸಿದ್ದಾರೆ.

    ದಾನ
    ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಪತಿ ಎಷ್ಟು ದಾನ ಮಾಡುತ್ತಿದ್ದಾರೆ ಎಂಬ ಅರಿವು ಪತ್ನಿಗೆ ಇರಬಾರದು ಎಂದು ಬರೆದಿದ್ದಾರೆ. ಈ ಕಾರಣದಿಂದಾಗಿ, ದಾನದ ಮಹತ್ವ ಮತ್ತು ಫಲವು ಕಳೆದುಹೋಗುತ್ತದೆ. ಇದಲ್ಲದೇ ಒಂದು ಕೈಯಿಂದ ದಾನ ಮಾಡಿದರೆ ಇನ್ನೊಂದು ಕೈಗೆ ತಿಳಿಯದಂತೆ ದಾನ ಮಾಡಬೇಕು ಎಂದೂ ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಇಲ್ಲದಿದ್ದರೆ ದಾನದ ಪುಣ್ಯ ಸಿಗುವುದಿಲ್ಲ. ಆದ್ದರಿಂದ ದಾನವನ್ನು ಯಾವಾಗಲೂ ರಹಸ್ಯವಾಗಿ ಮಾಡಬೇಕು.

    ಗಳಿಕೆ
    ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿಶಾಸ್ತ್ರದಲ್ಲಿ ನೀವು ಒಂದಕ್ಕಿಂತ ಹೆಚ್ಚು ಸ್ಥಳಗಳಿಂದ ಸಂಪಾದಿಸುತ್ತಿದ್ದರೆ, ಅದರ ಬಗ್ಗೆ ನಿಮ್ಮ ಹೆಂಡತಿಗೆ ಎಂದಿಗೂ ಹೇಳಬಾರದು ಎಂದು ಬರೆದಿದ್ದಾರೆ. ಹೆಂಡತಿ ತನ್ನ ಗಂಡನ ಸಂಪೂರ್ಣ ಆದಾಯದ ಬಗ್ಗೆ ತಿಳಿದುಕೊಂಡರೆ, ಅವಳು ತನ್ನ ಖರ್ಚುಗಳನ್ನು ಹೆಚ್ಚಿಸುತ್ತಾಳೆ, ಅದು ನಿಮ್ಮ ಬಜೆಟ್ ಅನ್ನು ಹಾಳುಮಾಡುತ್ತದೆ. ಆದ್ದರಿಂದ, ನಿಮ್ಮ ಆದಾಯದ ಮೂಲವನ್ನು ರಹಸ್ಯವಾಗಿಡಬೇಕು.

    ನಿಮ್ಮ ದೌರ್ಬಲ್ಯ
    ಚಾಣಕ್ಯನ ಪ್ರಕಾರ, ತನ್ನ ದೌರ್ಬಲ್ಯವನ್ನು ಹೆಂಡತಿಗೆ ಎಂದಿಗೂ ಹೇಳಬಾರದು. ಇದು ನಿಮ್ಮ ಸಂಬಂಧಗಳನ್ನು ಹಾಳುಮಾಡಬಹುದು. ನಿಜವಾಗಿ ಹೇಳಬೇಕೆಂದರೆ ಪತಿ-ಪತ್ನಿಯರ ನಡುವೆ ಜಗಳವಾದಾಗ ಅವರು ತಿಳಿದೋ ತಿಳಿಯದೆಯೋ ಇಂತಹ ಕೆಲವು ಮಾತುಗಳನ್ನು ಹೇಳಿ ಹೃದಯವನ್ನು ನೋಯಿಸುತ್ತಾರೆ. ಇದಲ್ಲದೇ ಇಂತಹ ಪರಿಸ್ಥಿತಿಯಲ್ಲಿ ಪತ್ನಿಯರು ಗಂಡನ ದೌರ್ಬಲ್ಯಗಳ ಬಗ್ಗೆ ತೆಗಳುವುದರಲ್ಲಿ ಹಿಂದೆ ಬೀಳುವುದಿಲ್ಲ. ಆದ್ದರಿಂದ, ಪ್ರತಿಯೊಂದು ದೌರ್ಬಲ್ಯ, ದೊಡ್ಡ ಅಥವಾ ಚಿಕ್ಕದನ್ನು ರಹಸ್ಯವಾಗಿಡಬೇಕು.

    ರಹಸ್ಯ
    ಮಹಿಳೆಯರು ತಮ್ಮ ಹೊಟ್ಟೆಯಲ್ಲಿ ಏನನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ, ಅಂದರೆ ಅವರು ದೀರ್ಘಕಾಲದವರೆಗೆ ಏನನ್ನೂ ಮರೆಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಆದ್ದರಿಂದ ಅವರಿಗೆ ಎಲ್ಲವನ್ನೂ ಹೇಳಬಾರದು. ಆಚಾರ್ಯ ಚಾಣಕ್ಯರು ಪತಿಯು ತನ್ನ ರಹಸ್ಯಗಳನ್ನು, ತನ್ನ ಅವಮಾನಗಳನ್ನು ಮತ್ತು ತನ್ನ ದೌರ್ಬಲ್ಯಗಳನ್ನು ತನ್ನ ಹೆಂಡತಿಗೆ ಎಂದಿಗೂ ಹೇಳಬಾರದು ಎಂದು ಹೇಳಿದ್ದಾರೆ. ಮಹಿಳೆಯರು ಈ ಮೂರು ವಿಷಯಗಳನ್ನು ನಿಮ್ಮ ವಿರುದ್ಧ ಅಸ್ತ್ರವಾಗಿ ಬಳಸಬಹುದು. ಆದ್ದರಿಂದ ಒಬ್ಬ ವ್ಯಕ್ತಿಯು ತನ್ನ ರಹಸ್ಯಗಳನ್ನು ರಹಸ್ಯವಾಗಿಡಬೇಕು.

    ಹಿಂದಿನ ಮಾಹಿತಿ
    ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಪತಿ ತನ್ನ ಹಿಂದಿನ ಇತಿಹಾಸದ ಬಗ್ಗೆ ಎಂದಿಗೂ ತನ್ನ ಹೆಂಡತಿಗೆ ಹೇಳಬಾರದು ಎಂದು ಹೇಳಿದ್ದಾರೆ. ಹಿಂದಿನದನ್ನು ಹಿಂದೆ ಬಿಟ್ಟರೆ ಉತ್ತಮ. ಇಲ್ಲದಿದ್ದರೆ, ಕೆಲವೊಮ್ಮೆ ಹಿಂದಿನ ಪುಟಗಳು ಇಡೀ ಜೀವನವನ್ನು ಹಾಳುಮಾಡುತ್ತವೆ.

    VIDEO| ಟೈಟಾನಿಕ್ ಈಸ್ ಬ್ಯಾಕ್: ಮತ್ತೆ ಸಾಗರದ ನೀಲಿ ನೀರಿನಲ್ಲಿ ಚಲಿಸಲಿದೆ ದೈತ್ಯ ಹಡಗು, ಹೇಗಿದೆ ನೋಡಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts