More

    ವಿವಾಹಿತೆಯೊಂದಿಗೆ ಕಿರಿಯ ಮಗ ಪರಾರಿ: ಅವಮಾನ ಸಹಿಸದೆ ತಾಯಿ, ಸಹೋದರ ನೇಣಿಗೆ ಶರಣು

    ಚಾಮರಾಜನಗರ: ವಿವಾಹಿತ ಮಹಿಳೆಯೊಂದಿಗೆ ಕಿರಿಯ ಮಗ ಪರಾರಿಯಾದ ಹಿನ್ನೆಲೆಯಲ್ಲಿ ಅವಮಾನ ತಾಳಲಾರದೆ ತಾಯಿ ಮತ್ತು ಸಹೋದರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದಲ್ಲಿ ನಡೆದಿದೆ.

    ಸುಬ್ಬಮ್ಮ (40) ಹಾಗೂ ಸಿದ್ದರಾಜು (26) ಮೃತ ದುರ್ದೈವಿಗಳು. ಕುಟುಂಬದ ಕಿರಿಯ ಮಗ ಹಾಗೂ ಎಲ್ಲರಿಗೂ ಪ್ರೀತಿ ಪಾತ್ರನಾಗಿದ್ದ ನಂಜುಂಡಿ ತನ್ನದೇ ಗ್ರಾಮದ ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿದ್ದಾನೆ. ಈ ಸುದ್ದಿ ಕೇಳಿ ಗ್ರಾಮದಲ್ಲಿ ತಲೆ ಎತ್ತಿಕೊಂಡು ಬಾಳಲು ಸಾಧ್ಯವೆ ಎಂದು ಹೆದರಿ ಮನೆಯಲ್ಲಿಯೇ ಇಬ್ಬರು ಒಟ್ಟಿಗೆ ನೇಣಿಗೆ ಶರಣಾಗಿದ್ದಾರೆ.

    ಘಟನಾ ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಪತ್ನಿ ಬೆಂಬಲದಿಂದ ಮಕ್ಕಳಿಂದಿಡಿದು ಮಹಿಳೆ, ಪುರುಷರ ಮೇಲೂ ಪಾದ್ರಿಯಿಂದ ರೇಪ್​: ವಿಚಾರಣೆಯಲ್ಲಿ ಆತಂಕಕಾರಿ ಮಾಹಿತಿ ಸ್ಪೋಟ

    ಕೌನ್​ ಬನೇಗಾ ಕರೋಡ್​ಪತಿ ಹೆಸರಲ್ಲಿ ವಂಚನೆ, ಮೂವರ ಬಂಧನ; ಸೈಬರ್​ ಕ್ರೈಂ ಪೊಲೀಸರಿಗೆ ವಂಚನೆ ಬೇರು ಸಿಕ್ಕಿದ್ದು ಪಾಕಿಸ್ತಾನದಲ್ಲಿ!

    ಅಂತಾರಾಷ್ಟ್ರೀಯ ಮಹಿಳಾ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ಗರ್ಭಿಣಿ ಬಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts