More

    ‘ಯಾವನ್ಲಾ ನೀನು? ತಿ* ಮುಚ್ಕಂಡು ಫೈಲ್ ತಗೋ ಬಾ…’ ಜನರ ಎದುರೇ ಅಧಿಕಾರಿಗೆ ಬೈದ ಸೋಮಣ್ಣ!

    ಚಾಮರಾಜನಗರ: ‘ಯಾವನ್ಲಾ ನೀನು? ತಿ*… ಮುಚ್ಕಂಡು ಫೈಲ್ ತಗೋ ಬಾ…’ ಹೀಗಂತ ಕಾರ್ಮಿಕ ಇಲಾಖೆ ಅಧಿಕಾರಿಯೊಬ್ಬರಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬೈದಿದ್ದು, ಈ ದೃಶ್ಯ ವೈರಲ್​ ಆಗಿದೆ.

    ಕೊಳ್ಳೇಗಾಲ ತಾಲೂಕಿನ ಕಾಗಲವಾಡಿ ಮೊಳೆ ಗ್ರಾಮದಲ್ಲಿ ಇತ್ತೀಚಿಗೆ ಕಲ್ಲು ಕ್ವಾರಿಯಲ್ಲಿ ಬಂಡೆಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಈ ಹಿನ್ನೆಲೆ ಶನಿವಾರ ಗ್ರಾಮಕ್ಕೆ ಭೇಟಿ‌ ನೀಡಿದ್ದ ಸಚಿವ ಸೋಮಣ್ಣ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಇದೇ ವೇಳೆ ಮೃತರ ಕುಟುಂಬಕ್ಕೆ ಪರಿಹಾರದ ಹಣ ನೀಡಲು ವಿಳಂಬ ಆಗಿರುವ ವಿಚಾರಕ್ಕೆ ಗರಂ ಆದ ಸಚಿವರು, ಕಾರ್ಮಿಕ ಇಲಾಖೆ ಅಧಿಕಾರಿ ಮಹದೇವಸ್ಚಾಮಿಗೆ ಜನರ ಎದುರೇ ಬೈದರು.

    ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು ಹಾವೇರಿಗೆ ಆಗಮಿಸಿದ್ದ ಮಂಡ್ಯ ಮೂಲದ ಶಿಕ್ಷಕ ಸಾವು

    ಕುಣಿಗಲ್​ ಸ್ಟಡ್​ ಫಾರಂನಲ್ಲಿ ದುರಂತ: ಹೆಜ್ಜೇನು ದಾಳಿಗೆ ಕೋಟ್ಯಂತರ ಬೆಲೆಬಾಳುವ ವಿದೇಶಿ ತಳಿಯ 2 ಕುದುರೆಗಳ ಸಾವು

    ಕೋಲಾರದಲ್ಲಿ ಮದ್ವೆ ಆಮಂತ್ರಣ ಪತ್ರಿಕೆ ಕೊಡುವ ನೆಪದಲ್ಲಿ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸ್ಫೊಟಕ ತಿರುವು: ದೂರು ಕೊಟ್ಟಾಕೆಯೇ ಕಳ್ಳಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts