More

    ಶಾಸಕ ರಘುಮೂರ್ತಿ ಫೋನ್‌ಇನ್

    ಚಳ್ಳಕೆರೆ: ಕರ್ನಾಟಕದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಚಿತ್ರದುರ್ಗದ ಕಚೇರಿಯಲ್ಲಿ ಏ.25ರ ಶನಿವಾರ ಆಯೋಜಿಸಿರುವ ಫೋನ್ ಇನ್ ಕಾರ್ಯಕ್ರಮದಲ್ಲಿ ಹಟ್ಟಿ ಚಿನ್ನದ ನಿಗಮದ ಮಾಜಿ ಅಧ್ಯಕ್ಷ, ಚಳ್ಳಕೆರೆ ಶಾಸಕ ರಘುಮೂರ್ತಿ ಭಾಗವಹಿಸಲಿದ್ದಾರೆ.

    ಬೆಳಗ್ಗೆ 11ರಿಂದ ಮಧ್ಯಾಹ್ನ 12ರ ವರೆಗೆ ಶಾಸಕರು ಚಳ್ಳಕೆರೆ ಕ್ಷೇತ್ರದ ಜನತೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವರು.

    ಕರೊನಾ ವೈರಾಣು ನಿವಾರಣೆಗೆ ಕೈಗೊಂಡ ಕಾರ್ಯ, ಕೈಗೊಳ್ಳಬೇಕಾದ ಕ್ರಮಗಳು ಸೇರಿ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಕುರಿತು ಸಾರ್ವಜನಿಕರು ದೂರವಾಣಿ ಕರೆ ಮಾಡಿ ಶಾಸಕರ ಜತೆ ಮಾತನಾಡಬಹುದು.

    ಕೃಷಿ ಉತ್ಪನ್ನಗಳ ಸಾಗಣೆಯಲ್ಲಿ ಸಮಸ್ಯೆ, ನಿರಾಶ್ರಿತರು, ವಲಸಿಗ ಕಾರ್ಮಿಕರಿಗೆ ಕಾಡುತ್ತಿರುವ ಆಹಾರ-ವಸತಿ ಸಮಸ್ಯೆ, ವೈದ್ಯಕೀಯ ಸೇವೆಯಲ್ಲಿನ ವ್ಯತ್ಯಯ, ಜನ, ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಇತರೆ ವಿಷಯಗಳ ಬಗ್ಗೆ ಗಮನ ಸೆಳೆಯಬಹುದು.

    ಈಗಾಗಲೇ ಮುಂಗಾರು ಕೃಷಿ ಚಟುವಟಿಕೆಗೆ ಚಾಲನೆ ಸಿಕ್ಕಿದ್ದು, ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಸೆರಿ ಕೃಷಿ ಸಂಬಂಧಿತ ಪ್ರಶ್ನೆಗಳು, ತೋಟಗಾರಿಕೆ ಉತ್ಪನ್ನಗಳ ಮಾರಾಟ, ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದಾದ ಹಾನಿ ಕುರಿತು ಮುಕ್ತವಾಗಿ ಮಾತನಾಡುವ ಜತೆಗೆ ಸೂಕ್ತ ಪರಿಹಾರೋಪಾಯಗಳ ಕುರಿತು ಸಮಾಲೋಚಿಸಬಹುದು. ದೂರವಾಣಿ ಸಂಖ್ಯೆ- 08194 225111ಗೆ ಕರೆ ಮಾಡಿ ಮಾತನಾಡಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts