ಚಾಮರಾಜನಗರ: ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕನಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದಾಗಿ ಚರ್ಕವರ್ತಿ ಸೂಲಿಬೆಲೆ ಭರವಸೆ ನೀಡಿದರು.
ತಾಲೂಕಿನ ಚನ್ನಪ್ಪನ ಪುರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿರುವ “ವೀರ್ ಭಾರತ್ ಗುರಿಯತ್ತ ನಡೆ” ಪಾದಯಾತ್ರೆ ವೇಳೆ ಗ್ರಾಮದ ಯುವಕ ಮಲ್ಲಿಕಾರ್ಜುನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ವಿಷಯ ತಿಳಿದ ಚರ್ಕವರ್ತಿ ಸೂಲಿಬೆಲೆ ಅವರು ಆತನ ಚಿಕಿತ್ಸೆಗೆ ನೆರವಾಗುವುದಾಗಿ ತಿಳಿಸಿದರು.
ಶುಕ್ರವಾರ ಬೆಳಗ್ಗೆ ಅಮಚವಾಡಿಯಿಂದ ಆರಂಭಗೊಂಡ ವೀರ್ ಭಾರತ್ ಗುರಿಯತ್ತ ನಡೆ ವಿ.ಸಿ.ಹೊಸೂರು ಮಾರ್ಗವಾಗಿ ಸದ್ಯ ವೆಂಕಟಯ್ಯನ ಛತ್ರ ತಲುಪಿದೆ.