More

    ನಮ್ಮ ಮನೆಯಲ್ಲಿ ನಾನು ನಟಿಯಾಗುತ್ತೇನೆ ಎಂಬ ಐಡಿಯಾನೇ ಇರಲಿಲ್ಲ: ನಟಿ ಚೈತ್ರಾ ಜೆ.ಆಚಾರ್

    ಬೆಂಗಳೂರು: ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಸ್ಯಾಂಡಲ್​ವುಡ್​​ನ ಯುವ ನಟಿ ಚೈತ್ರಾ ಜೆ.ಆಚಾರ್​​, ಸಿಂಗರ್​ನಿಂದ ನಟನೆಗೆ ಬಂದ ಹಾದಿ ಹೇಗೆ ಎಂಬ ಪ್ರಶ್ನೆಗೆ ಈ ರೀತಿ ಉತ್ತರ ನೀಡಿದ್ದಾರೆ.

    ಇದನ್ನೂ ಓದಿ: ಮೈಸೂರು ವಿವಿ ಅಂತರವಲಯ ಮಟ್ಟದ ಕ್ರೀಡಾಕೂಟ: ಮಂಡ್ಯ ಮಹಿಳಾ ಕಾಲೇಜು ಉತ್ತಮ ಸಾಧನೆ

    “ನನಗೆ ಅದರ ಬಗ್ಗೆ ಸ್ವಲ್ಪವೂ ತಿಳಿದಿರಲಿಲ್ಲ. ಆದ್ರೆ ನಮ್ಮ ಮನೆಯಲ್ಲಿ ನಾನೊಬ್ಬಳು ಸಿಂಗರ್​ ಆಗುತ್ತೀನಿ ಎಂದೆ ಗೊತ್ತಿತ್ತೇ ಹೊರತು ನಟಿಯಾಗಲ್ಲ! ಶಾಲೆ ಮತ್ತು ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕಗಳಲ್ಲಿ ನಟನೆ ಮಾಡುತ್ತಿದ್ದೆ, ಆಕ್ಟಿಂಗ್​ನಲ್ಲಿ ಅಧಿಕ ಆಸಕ್ತಿ ನನ್ನಲಿತ್ತು. ಆದ್ರೆ, ನಟನೆಯನ್ನು ವೃತ್ತಿಯಾಗಿ ಮುಂದುವರಿಸಿಕೊಂಡು ಹೋಗಬೇಕು ಅಥವಾ ಚಿತ್ರರಂಗದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಐಡಿಯಾ ನನಗೆ ಇರಲಿಲ್ಲ” ಎಂದು ಹೇಳಿದರು.

    ಇದನ್ನೂ ಓದಿ: ಕೆಳಗೆ ಬಿದ್ದು ತನಗೇನೂ ತಿಳಿಯದಂತೆ ಮುಖ ಮಾಡಿಕೊಂಡ ಪಾಂಡಾ; ಈ ವಿಡಿಯೋ ನೋಡಿದರೆ ನಗು ಉಕ್ಕಿ ಬರದೇ ಇರಲಾರದು…

    “ಈಗಲೂ ನಮ್ಮ ತಾಯಿಯನ್ನು ನಿಮ್ಮ ಮಗಳು ಏನು ಮಾಡಬೇಕಿತ್ತು ಎಂದು ಕೇಳಿದರೆ, ಅವರು ನಾನೊಬ್ಬಳು ಸಿಂಗರ್​ ಆಗಿದ್ದರೆ ಚೆನ್ನಾಗಿರುತ್ತಿತ್ತು ಎಂದೇ ಹೇಳುತ್ತಾರೆ” ಎಂದು ಹೇಳಿದರು. ‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ಹಾಡಲು ಅವಕಾಶ ಲಭಿಸಿದ್ದು ಹೇಗೆ ಎಂಬುದರ ಬಗ್ಗೆ ಚೈತ್ರಾ ಜೆ.ಆಚಾರ್ ಈ ಕೆಳಗಿನ ಸಂದರ್ಶನದ ವಿಡಿಯೋದಲ್ಲಿ ಮಾತನಾಡಿದ್ದಾರೆ. ವೀಕ್ಷಿಸಲು ಲಿಂಕ್​ ಕ್ಲಿಕ್ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts