ಬೆಂಗಳೂರು: ಕಾಟನ್ಪೇಟೆ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಕೇಸ್ ಸಂಬಂಧ ಸಿಸಿಬಿ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಶನಿವಾರ ಬೆಳಗ್ಗೆ 10.10ರ ಸುಮಾರಿಗೆ ಸಿಸಿಬಿ ಕಚೇರಿಗೆ ಹಾಜರ್ ಆದರು.
ಸಿಸಿಬಿ ಕಚೇರಿಗೆ ಬಂದ ಅಕುಲ್ ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಕರ್ನಾಟಕದ ಜನತೆಗೆ ನಮಸ್ಕಾರಗಳು. ಸಿಸಿಬಿ ಹೇಳಿದ ಸಮಯಕ್ಕೆ ಬಂದಿದ್ದೀನಿ, ಹತ್ತುನಿಮಿಷ ತಡವಾಗಿದೆ. ಡ್ರಗ್ಸ್ ದಂಧೆಯ ಆರೋಪಿ ವೈಭವ್ ಜೈನ್ ಮತ್ತು ಪ್ರತಿಕ್ ಶೆಟ್ಟಿ ನನಗೆ ಹಾಯ್-ಬಾಯ್ ಫ್ರೆಂಡ್ ಅಷ್ಟೆ. ನನ್ನ ರೆಸಾರ್ಟ್ ಅನ್ನು ಲೀಜ್ಗೆ ಕೊಟ್ಟಿದ್ದೆ. ಅದರ ದಾಖಲೆಗಳನ್ನು ತಂದಿದ್ದೇನೆ. ಎಲ್ಲ ಮಾಹಿತಿಯನ್ನೂ ತನಿಖಾಧಿಕಾರಿಗಳಿಗೆ ನೀಡುತ್ತೇನೆ. ಲಾಕ್ಡೌನ್ ವೇಳೆ ಅಲ್ಲಿ ಏನು ನಡೆಯಿತು? ಎಂಬುದರ ಬಗ್ಗೆ ನನಗೆ ದೇವ್ರಾಣೆ ಗೊತ್ತಿಲ್ಲ. ”ಮಗ ನೀನು ತಪ್ ಮಾಡಿಲ್ಲ ಅಂದ್ರೆ ಹೆದರಬೇಡ” ಎಂದು ತನ್ನ ತಾಯಿ ಹೇಳಿದ್ದಾರೆ’ ಎಂದ ಅಕುಲ್, ‘ಈಗ ನಾನು ಕಚೇರಿ ಒಳಗೆ ಹೋಗುತ್ತೇನೆ. ವಿಚಾರಣೆ ಏನಿದೆಯೋ ಅದನ್ನು ಮುಗಿಸ್ತೀನಿ’ ಎಂದರು. ಇದನ್ನೂ ಓದಿರಿ ಡ್ರಗ್ಸ್ ಕೇಸ್; ಅಕುಲ್ ಬಾಲಾಜಿ, ಪ್ರಭಾವಿ ರಾಜಕಾರಣಿಯ ಪುತ್ರ ಸೇರಿ ಮೂವರಿಗೆ ಸಿಸಿಬಿ ನೋಟಿಸ್
‘ಡ್ರಗ್ಸ್ ದಂಧೆಗೆ ಬ್ರೇಕ್ ಹಾಕುತ್ತಿರುವುದು ಒಳ್ಳೆಯ ಕಾರ್ಯ. ಸಿಸಿಬಿಗೆ ನನ್ನ ಸಾಥ್ ಇದೆ. ವಿಚಾರಣೆಗೆ ಸ್ಪಂದಿಸಲಿದ್ದೇನೆ’ ಎನ್ನುತ್ತಾ ಅಕುಲ್, ಸಿಸಿಬಿ ಕಚೇರಿ ಒಳಗೆ ಹೋದರು.
ದೊಡ್ಡಬಳ್ಳಾಪುರದ ಲಘುಮೇನಹಳ್ಳಿಯಲ್ಲಿ ಅಕುಲ್ ಬಾಲಾಜಿ ಒಡೆತನದ ಸನ್ ಶೈನ್ ಬೈ ಜೆಡೆ ರೆಸಾರ್ಟ್ ಇದೆ. ಈ ರೆಸಾರ್ಟ್ನಲ್ಲಿಯೇ ಸಿಸಿಬಿ ವಶದಲ್ಲಿರುವ ಡ್ರಗ್ಸ್ ಪೆಡ್ಲರ್ಗಳು ಪಾರ್ಟಿ ಆಯೋಜಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಡಿವೈಎಸ್ಪಿ ರಂಗಪ್ಪ ನೇತೃತ್ವದ ತಂಡ ರೆಸಾರ್ಟ್ ಬಳಿ ಮಾಹಿತಿ ಕಲೆ ಹಾಕುತ್ತಿದೆ.
ಶುಕ್ರವಾರ ಸಂಜೆಯೇ ಅಕುಲ್ ಬಾಲಾಜಿ, ಬಿಬಿಎಂಪಿ ಕಾರ್ಪೋರೇಟರ್ ಆರ್.ವಿ.ಯುವರಾಜ್ ಮತ್ತು ನಟ ಸಂತೋಷ್ ಕುಮಾರ್ಗೆ ಸಿಸಿಬಿ ನೋಟಿಸ್ ಕೊಟ್ಟಿತ್ತು.
‘ನಾವಿಬ್ಬರೂ ಒಟ್ಟಿಗೆ ಡ್ರಗ್ಸ್ ಸೇವಿಸುತ್ತಿದ್ದೆವು, ಬಿಎಂಡಬ್ಲ್ಯು ಕಾರಿನಲ್ಲೇ ಹೋಟೆಲ್ಗೆ ಕರೆದೊಯ್ಯುತ್ತಿದ್ದೆ…’
‘ರಾಗಿಣಿಗೆ ನಾನೇ ಡ್ರಗ್ಸ್ ಕೊಡುತ್ತಿದ್ದೆ… ಡ್ರಗ್ಸ್ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’