ಕೊಚ್ಚಿ: ಪತ್ನಿಯನ್ನು ಕಚ್ಚಿದ್ದಕ್ಕೆ ನೆರೆಮನೆಯವರ ಸಾಕು ನಾಯಿಯನ್ನು ಹೊಡೆದು ಕೊಂದಿದ್ದಲ್ಲದೆ, ಮಾಲಕಿಯ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಕೇರಳದ ಅಬಕಾರಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರತೀಕಾರ
ಆರೋಪಿ ಅಧಿಕಾರಿಯನ್ನು ನೆಡುಮಾಂಗಡ ಮೂಲದ ಪ್ರಶಾಂತ್ ಎಂದು ಗುರುತಿಸಲಾಗಿದೆ. ಕಾರ್ಯಕ್ರಮವೊಂದಕ್ಕೆ ನೆರೆಮನೆಯವರನ್ನು ಕರೆಯಲೆಂದು ಪ್ರಶಾಂತ್ ಪತ್ನಿ ರಾಜಲಕ್ಷ್ಮೀ ತೆರಳಿದ್ದಾಗ ಸಾಕು ನಾಯಿ ದಾಳಿ ನಡೆಸಿ, ಅವರ ಎರಡೂ ಕೈಗಳನ್ನು ಕಚ್ಚಿತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನೆರೆಮನೆಗೆ ತೆರಳಿದ ಪ್ರಶಾಂತ್, ಕಬ್ಬಿಣದ ಸಲಾಕೆಯಿಂದ ಹೊಡೆದು ನಾಯಿಯನ್ನು ಕೊಂದು ಹಾಕಿದರು.
ಮುರಿದ ಹಲ್ಲು
ನಾಯಿ ಹತ್ಯೆಯ ಬಳಿಕ ಮಾಲಕಿ ಆದಿತ್ಯ ರಶ್ಮಿ ಅವರ ಮೇಲೂ ಪ್ರಶಾಂತ್ ಹಲ್ಲೆ ಮಾಡಿದ್ದಾರೆ. ಈ ವೇಳೆ ರಶ್ಮಿ ಅವರ ಹಲ್ಲು ಮುರಿದಿದೆ. ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಈ ಘಟನೆ ಏಪ್ರಿಲ್ 20ರ ಮಧ್ಯಾಹ್ನ 2.30ರ ಸುಮಾರಿಗೆ ಸಂಭವಿಸಿದ್ದು, ಇದೀಗ ಪ್ರಶಾಂತ್ ವಿರುದ್ಧ ರಶ್ಮಿ ಪ್ರಕರಣ ದಾಖಲಾಗಿದೆ.
ಪ್ರಶಾಂತ್ ಅಬಕಾರಿ ಇಲಾಖೆಯಲ್ಲಿ ಪ್ರೊಬೇಷನ್ನಲ್ಲಿದ್ದಾರೆ. ಪ್ರಶಾಂತ್ ವಿರುದ್ಧ ಶ್ವಾನವನ್ನು ಕೊಂದು, ಮಹಿಳೆಗೆ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಶಾಂತ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. (ಏಜೆನ್ಸೀಸ್)
ಹಾಲಿನ ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? ಜನರಿಗಾಗಿ ಮಾಹಿತಿ ನೀಡಿದ FSSAI
ಚುನಾವಣೆ ಫಲಿತಾಂಶ ಬಳಿಕ ಸಿಎಂ ಯಾರಾಗಬೇಕೆಂದು ಬಿಜೆಪಿ ತೀರ್ಮಾನ: ಸಚಿವ ಅಶ್ವತ್ಥ ನಾರಾಯಣ ಅಭಿಮತ
ಅವರು ಊಟದ ವಿಚಾರದಲ್ಲಿ ಮಕ್ಕಳಂತೆ ಹಠ ಮಾಡ್ತಾರೆ… ಬರೀ ಮೊಸರನ್ನ ತಿಂತಾರೆ; ಅನಿತಾ ಕುಮಾರಸ್ವಾಮಿ