ಚಂಡೀಗಡ: ಪಂಜಾಬ್ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು 2022 ರ ವಿಧಾನಸಭಾ ಚುನಾವಣೆಯಲ್ಲಿ ಪಟಿಯಾಲಾದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಭಿನ್ನಮತದಿಂದಾಗಿ ಸಿಎಂ ಪದವಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ತೊರೆದ ಕ್ಯಾಪ್ಟನ್, ತಮ್ಮ ಹೊಸ ರಾಜಕೀಯ ಪಕ್ಷ ‘ಪಂಜಾಬ್ ಲೋಕ್ ಕಾಂಗ್ರೆಸ್’ ಅಭ್ಯರ್ಥಿಯಾಗಲಿದ್ದಾರೆ.
ಈ ಮುನ್ನ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಸ್ಪರ್ಧಿಸುವ ಕ್ಷೇತ್ರದಲ್ಲೇ ಚುನಾವಣೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದ ಕ್ಯಾಪ್ಟನ್, “ನಾನು ಪಟಿಯಾಲದಿಂದ ಸ್ಪರ್ಧಿಸುತ್ತೇನೆ. ಪಟಿಯಾಲ 400 ವರ್ಷಗಳಿಂದ ನಮ್ಮೊಂದಿಗಿದೆ. ಅದನ್ನು ಸಿಧುವಿನಿಂದಾಗಿ ನಾನು ಬಿಡುವುದಿಲ್ಲ” ಎಂದು ಇಂದು ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಿವರು; ಯಾವ ಜಿಲ್ಲೆಗೆ ಯಾರು? ಇಲ್ಲಿದೆ ಮಾಹಿತಿ…
ಕ್ಯಾಪ್ಟನ್ ಅಮರಿಂದರ್ ಸಿಂಗ್ರ ಕುಟುಂಬಕ್ಕೆ ಪಟಿಯಾಲದಲ್ಲಿ ಭಾರೀ ಹಿಡಿತವಿದೆ. ಅವರ ತಂದೆ ಅಂದಿನ ಪಟಿಯಾಲ ರಾಜಮನೆತನದ ಕೊನೆಯ ಮಹಾರಾಜರಾಗಿದ್ದರು. ಕ್ಯಾಪ್ಟನ್ ಸ್ವತಃ ಅಲ್ಲಿಂದ ನಾಲ್ಕು ಬಾರಿ ಗೆದ್ದಿದ್ದರೆ, ಅವರ ಪತ್ನಿ ಪ್ರೆಣೀತ್ ಕೌರ್ ಕೂಡ ಪಟಿಯಾಲ ಕ್ಷೇತ್ರವನ್ನು 2014 ರಿಂದ 2017 ರವರೆಗೆ ಮೂರು ವರ್ಷ ಪ್ರತಿನಿಧಿಸಿದ್ದಾರೆ.
ಕ್ಯಾಪ್ಟನ್ ಸಿಂಗ್ ತಮ್ಮ ಪಕ್ಷವು ಭಾರತೀಯ ಜನತಾ ಪಕ್ಷ(ಬಿಜೆಪಿ)ದೊಂದಿಗೆ ಚುನಾವಣಾ ಒಡಂಬಡಿಕೆ ಮಾಡಿಕೊಳ್ಳುವುದಾಗಿ ಸೂಚನೆ ನೀಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ ನಂತರ ಈ ಒಪ್ಪಂದಕ್ಕೆ ದಾರಿ ಸುಗಮವಾಗಿದೆ. (ಏಜೆನ್ಸೀಸ್)
ಜಡ್ಜ್ ಚೇಂಬರಿಗೆ ನುಗ್ಗಿ ಹಲ್ಲೆ ಮಾಡಿದ ಪೊಲೀಸರು! ರಾಜ್ಯದ ಡಿಜಿಪಿಗೆ ಹೈಕೋರ್ಟ್ ಬುಲಾವ್