ಬೆಂಗಳೂರು: ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶಾಸಕರಾದ ರಮೇಶ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಸುಧಾಕರ್, ಬೈರತಿ ಬಸವರಾಜ್, ಶಿವರಾಂ ಹೆಬ್ಬಾರ್, ಬಿ.ಸಿ.ಪಾಟೀಲ್, ಕೆ.ಗೋಪಾಲಯ್ಯ, ಕೆ.ನಾರಾಯಣಗೌಡ, ಶ್ರೀಮಂತಪಾಟೀಲ್ ಹಾಗೂ ಆನಂದ್ಸಿಂಗ್ ಅವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.
1)ರಮೇಶ ಜಾರಕಿ ಹೊಳಿ: ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ 4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 3ನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜಾತಿ: ವಾಲ್ಮೀಕಿ.
2)ಎಸ್.ಟಿ.ಸೋಮಶೇಖರ್: ಯಶವಂತಪುರ ವಿಧಾನಸಭಾ ಕ್ಷೇತ್ರ. 2ನೇ ಬಾರಿ ಶಾಸಕರು. ಬಿಡಿಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ. ಜಾತಿ:ಒಕ್ಕಲಿಗ
3)ಡಾ. ಸುಧಾಕರ್: ಚಿಕ್ಕಬಳ್ಳಾಪುರ ಕ್ಷೇತ್ರ. 3ನೆ ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿಗೆ ಸಚಿವರು. ಜಾತಿ: ಒಕ್ಕಲಿಗ.
4)ಬೈರತಿ ಬಸವರಾಜು: ಕೆಆರ್ಪುರ ಕ್ಷೇತ್ರ, 3ನೇ ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿಗೆ ಸಚಿವರು. ಜಾತಿ ಕುರುಬ.
5) ಶಿವರಾಂ ಹೆಬ್ಬಾರ್: ಯಲ್ಲಾಪುರ ಕ್ಷೇತ್ರ, 3 ಬಾರಿ ಶಾಸಕರು, ಮೊದಲ ಬಾರಿಗೆ ಸಚಿವರು. ಜಾತಿ: ಬ್ರಾಹ್ಮಣ
6)ಬಿ.ಸಿ.ಪಾಟೀಲ್: ಹಿರೇಕೆರೂರು ಕ್ಷೇತ್ರ. 4ನೇ ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿ ಸಚಿವರು. ಜಾತಿ: ಲಿಂಗಾಯತ
7)ಕೆ.ಗೋಪಾಲಯ್ಯ: ಮಹಾಲಕ್ಷ್ಮೀಲೇಔಟ್ ಕ್ಷೇತ್ರ, 2ನೇ ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿಗೆ ಸಚಿವರು. ಜಾತಿ: ಒಕ್ಕಲಿಗ
8) ಕೆ.ನಾರಾಯಣಗೌಡ: ಕೆಆರ್ಪೇಟೆ ಕ್ಷೇತ್ರ. 3ನೇ ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿಗೆ ಸಚಿವರು. ಜಾತಿ: ಒಕ್ಕಲಿಗರು.
9)ಶ್ರೀಮಂತ ಪಾಟೀಲ್: ಕಾಗವಾಡ ಕ್ಷೇತ್ರ. 2 ಬಾರಿ ಶಾಸಕರಾಗಿ ಆಯ್ಕೆ. ಮೊದಲ ಬಾರಿ ಸಚಿವರು. ಜಾತಿ: ಮರಾಠ
10)ಆನಂದ್ಸಿಂಗ್: ವಿಜಯನಗರ ಕ್ಷೇತ್ರ, 3 ಬಾರಿ ಶಾಸಕರು. 2ನೇ ಬಾರಿಗೆ ಸಚಿವರು. ಜಾತಿ: ರಜಪೂತ್.
(ದಿಗ್ವಿಜಯ ನ್ಯೂಸ್)