ಕೋಲ್ಕತ: ಮಧ್ಯಮ ವರ್ಗದ ಕುಟುಂಬವನ್ನು ನಡೆಸಲು ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಇಷ್ಟಕ್ಕೆಲ್ಲ ಕಾರಣ ಅಂದು ಕಾರು ಹತ್ತಿದ ಆ ಮೂವರು.
ಇದನ್ನೂ ಓದಿ: ಉಪಚುನಾವಣೆ ಸೋಲಿನ ಬಳಿಕ ಕುಸುಮಾ ಮೊದಲ ಪ್ರತಿಕ್ರಿಯೆ ಹೀಗಿದೆ…
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಖುರ್ಸಿದ್ ಅಹಮ್ಮದ್ ಎಂದಿನಂತೆ ಶುಕ್ರವಾರವೂ ಕಾರಿನ ಬಾಡಿಗೆಗಾಗಿ ಕಾಯುತ್ತಿದ್ದರು. ಆ್ಯಪ್ ಆಧಾರಿತ ಕ್ಯಾಬ್ ಸೇವೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುವ ಅವರಿಗೆ ರಶ್ಮೋನಿ ರಸ್ತೆಯಿಂದ ಪೂರ್ವ ಬುರ್ದ್ವಾನ್ಗೆ ಒಂದು ಬಾಡಿಗೆ ಸಿಕ್ಕಿದೆ. ಕ್ಯಾಬ್ ಬುಕ್ ಮಾಡಿದ್ದ ಮೂವರನ್ನು ಕಾರೊಳಗೆ ಹತ್ತಿಸಿಕೊಂಡ ಖುರ್ಸಿದ್ ಪೂರ್ವ ಬುರ್ದ್ವಾನ್ಗೆ ಅವರನ್ನು ಕರೆದೊಯ್ದಿದ್ದಾನೆ. ಅಲ್ಲಿಗೆ ತೆರಳಿದ ನಂತರ ಅಶ್ಗ್ರಾಮ್ನ ಗೋಬಿಂದರ್ಪುರಕ್ಕೆ ಕರೆದೊಯ್ಯಲು ಅವರು ಹೇಳಿದ್ದಾರೆ. ಅದರಂತೆ ಆತ ಮಾಡಿದ ನಂತರ ಶಕ್ತಿಗರ್ಗೆ ಕರೆದೊಯ್ಯಲು ಹೇಳಲಾಗಿದೆ. ಶಕ್ತಿಗರ್ ಕಡೆಗೆ ಹೋಗುವಾಗ ಆ ಮೂವರು ಖುರ್ಸಿದ್ ತಲೆಗೆ ಬಂದೂಕು ಇಟ್ಟಿದ್ದಾರೆ. ಆತನ ಬಾಯಿ, ಕೈ ಕಾಲನ್ನು ಕಟ್ಟಿ ಥಳಿಸಿದ್ದಾರೆ. ಅವನ ಜೇಬಿನಲ್ಲಿದ್ದ 7 ಸಾವಿರ ರೂಪಾಯಿ, ಗಾಡಿಯ ದಾಖಲೆಗಳಲ್ಲೆವನ್ನು ಕಿತ್ತುಕೊಂಡು, ಆತನನ್ನು ಗಾಡಿಯಿಂದ ಹೊರಗೆ ದಬ್ಬಿದ್ದಾರೆ. ಕೆಲವೇ ಕ್ಷಣದಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ: ಲಾರಿ-ಕಾರು ನಡುವೆ ಅಪಘಾತ: ಸಚಿವ ಜಗದೀಶ್ ಶೆಟ್ಟರ್ ಪುತ್ರ, ಸೊಸೆ ಆಸ್ಪತ್ರೆಗೆ ದಾಖಲು
ಎಚ್ಚರ ತಪ್ಪಿ ಬಿದ್ದಿದ್ದ ಖುರ್ಸಿದ್ ಕೆಲ ಸಮಯದ ನಂತರ ಎಚ್ಚರಗೊಂಡಿದ್ದಾರೆ. ಸ್ಥಳೀಯರ ಸಹಾಯದಿಂದ ಪೊಲೀಸ್ ಠಾಣೆಗೆ ತಲುಪಿ, ದೂರು ದಾಖಲಿಸಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪರಾಧಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಪಟಾಕಿ ಹೊಡೆಯಿರಿ, ರಾಮ ಬಂದಿದ್ದನ್ನು ಸಂಭ್ರಮಿಸಿ! ಪಟಾಕಿ ಬ್ಯಾನ್ ಮಾಡಲಾಗದು ಎಂದು ಸಿಎಂ
ಊಟ ಕೊಡದಿದ್ದರೆ ಅರೆಸ್ಟ್ ಮಾಡಿಬಿಡುತ್ತೇನೆ! ಬಯಲಾಯ್ತು ಖತರ್ನಾಕ್ ಕಳ್ಳಿಯ ಅಸಲಿಯತ್ತು