More

    ರಾಮಮಂದಿರಕ್ಕೆ ನೀವೆಷ್ಟು ಹಣ ಕೊಟ್ಟಿದ್ದೀರಿ ಮೊದಲು ಹೇಳಿ: ಲೆಕ್ಕ ಕೇಳಿದ ಎಚ್​ಡಿಕೆಗೆ ಸಿ.ಟಿ.ರವಿ ಪ್ರಶ್ನೆ

    ಚಿಕ್ಕಮಗಳೂರು: ರಾಮನ ಹೆಸರಿನಲ್ಲಿ ಹಣ ಅವ್ಯವಹಾರ ನಡೆದಿದೆ ಎಂದು ರಾಮಮಂದಿರದ ಲೆಕ್ಕ ಕೇಳಿದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರ ಮೇಲೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗಿ ಬಿದ್ದಿದ್ದಾರೆ. ಪ್ರಚಾರದ ತೆವಲಿಗೆ ಕುಮಾರಸ್ವಾಮಿ ಹೇಳಿಕೆ ಕೊಡ್ತಿದ್ದಾರೆ. ಅವರ ಹೇಳಿಕೆಯಲ್ಲಿ ಸ್ಪಷ್ಟತೆ ಅಥವಾ ಉದ್ದೇಶಗಳಿಲ್ಲ ಎಂದಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, “ನಾವು ರಾಮಮಂದಿರ ಹೋರಾಟ ಮಾಡುವಾಗ ನೀವು ಮಸೀದಿ ಜಪ ಮಾಡುತ್ತಿದ್ರಿ. ನಾವು ಮನೆ-ಮನೆಗೆ ಹೋಗಿ ರಾಮ ಮಂದಿರದ ವಿಚಾರ ತಿಳಿಸುತ್ತಿದ್ವಿ. ನೀವು ಟೋಪಿ ಹಾಕೊಂಡು ನಮಾಜ್ ಮಾಡೋಕೆ ಹೋಗ್ತಿದ್ರಿ.ರಾಮಮಂದಿರ ಹೋರಾಟದಲ್ಲಿ ನಿಮ್ಮ ಪಾತ್ರ ಏನು ತಿಳಿಸಿ” ಎಂದು ಎಚ್​ಡಿಕೆಗೆ ಸವಾಲು ಹಾಕಿದರು.

    ಇದನ್ನೂ ಓದಿ: ‘ರಾಮನ ಹೆಸರಲ್ಲಿ ಹಣದ ಅವ್ಯವಹಾರ ನಡೆದಿದೆ’ – ಆರ್​ಎಸ್​ಎಸ್​ ವಿರುದ್ಧ ಎಚ್​ಡಿಕೆ ಆರೋಪ

    ರಾಮಮಂದಿರಕ್ಕೆ ಹಣ ಕೊಟ್ಟವರಿಗೆ ಲೆಕ್ಕ ಕೇಳುವ ಅಧಿಕಾರವಿದೆ. ನೀವು ಎಷ್ಟು ಹಣ ಕೊಟ್ಟಿದ್ದೀರಿ? ಕೊಟ್ಟಿರೋ ಹಣದ ಲೆಕ್ಕ ಹೇಳಿ, ರಾಮಮಂದಿರದ ಲೆಕ್ಕ ಕೇಳಿ ಎಂದು ಖಡಕ್​ ಆಗಿ ಹೇಳಿದ ರವಿ, ರಾಮಮಂದಿರದ ಹಣವನ್ನ ದುರುಪಯೋಗ ಮಾಡೋದಕ್ಕೆ ಫ್ಯಾಮಿಲಿ ಖಾನ್​​ದಾನ್ ಅಲ್ಲಿಲ್ಲ ಎಂದು ಕುಟುಕಿದರು. ರಾಮಮಂದಿರದ ನಿರ್ಮಾಣ ನೋಡಿ ಸಂಕಟ ಆಗ್ತಿದ್ಯಾ? ಎಂದು ಪ್ರಶ್ನಿಸಿ, ಮಂದಿರದ ನಿರ್ಮಾಣ ಆದ ಮೇಲೆ ಪೂಜೆಗೆ ಬನ್ನಿ ಎಂದರು.

    ಭಾರತ ಕ್ರಿಕೆಟ್​ ತಂಡದ ಹೆಡ್​ ಕೋಚ್​ ಆಗಲಿದ್ದಾರೆ, ರಾಹುಲ್​ ದ್ರಾವಿಡ್​

    ಬಡಿಗೆ ಹಿಡಿದು ಬಡಿದಾಡಿಕೊಂಡ ಭಕ್ತರು! ಆಂಧ್ರ ಗಡಿಯ ಜಾತ್ರೆಯಲ್ಲಿ 80 ಜನರಿಗೆ ಗಾಯ

    ಚಿಕ್ಕ ವಯಸ್ಸಲ್ಲಿ ರೈತನ ವೇಷ ಧರಿಸಿದ್ದ ಈ ಹುಡುಗ ಯಾರು, ಹೇಳಬಲ್ಲಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts