More

    ದ್ವಿಚಕ್ರ ವಾಹನ ಸವಾರ ಸಾವು, ಬಸ್ ಚಾಲಕನಿಗೆ ಶಿಕ್ಷೆ


    ಕಾರ್ಕಳ: ಕುಕ್ಕೂಂದೂರು ಅಯ್ಯಪ್ಪನಗರ ಎಂಬಲ್ಲಿ ಕಾರ್ಕಳ -ಉಡುಪಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದ ಸವಾರರೊಬ್ಬರು ಸಾವಿಗೀಡಾಗ ಘಟನೆಗೆ ಸಂಬಂಧಿಸಿದಂತೆ ಖಾಸಗಿ ಬಸ್ ಚಾಲಕನು ಪ್ರಕರಣದಲ್ಲಿ ಅಪರಾಧಿ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿ ಚೇತನ್ ಎಸ್. ಎಫ್ ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದಾರೆ.
    2018 ಮೇ 25ರ ರಾತ್ರಿ 9.15ರ ವೇಳೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಕುಕ್ಕುಂದೂರು ದುರ್ಗ ನಗರದ ಗರಡಿಬಳಿಯ ನಿವಾಸಿ ಹರಿಯಣ್ಣ ನಾಯಕ್(54) ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾದವರು.

    ಕಾರ್ಕಳ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ಆರೋಪಿ ಬಸ್ ಚಾಲಕ ಮೂಡುಬಿದಿರೆಯ ಮಿಜಾರು ಗ್ರಾಮದ ಹಂಡೇಲು ನಿವಾಸಿ ಅಬ್ದುಲ್ ರಹಮಾನ್ ಎಚ್. ಅಪರಾಧಿ ಎಂದು ತೀರ್ಪು ನೀಡಿ ಶಿಕ್ಷೆ ಪ್ರಮಾಣವನ್ನು ವಿಧಿಸಿದೆ. ಕಲಂ 279ರ ಅನ್ವಯ ಅತಿ ಗೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿರುವ ಹಿನ್ನೆಲೆಯಲ್ಲಿ 1,000 ರೂ. ದಂಡ ತಪ್ಪಿದಲ್ಲಿ 1 ತಿಂಗಳ ಸದಾ ಸಜೆ, 304ನೇ ಕಲಂ ಅನ್ವಯ ಅಪಘಾತದಲ್ಲಿ ಸಾವಿಗೀಡಾದ ಹಿನ್ನಲೆಯಲ್ಲಿ 6 ತಿಂಗಳುಗಳು ಸಾದಾ ಕಾರಗೃಹವಾಸ ಹಾಗೂ 2,000 ರೂ. ದಂಡ ವಿಧಿಸಲಾಗಿದೆ. ದಂಡ ತೆರಲು ತಪ್ಪಿದಲ್ಲಿ 1 ತಿಂಗಳು ಸದಾ ಸಜೆ ವಿಧಿಸಿದೆ. ಸರ್ಕಾರಿ ಸಹಾಯಕ ಅಭಿಯೋಜಕಿ ಶೋಭಾ ಮಹದೇವ ನಾಯಕ್ ಸರ್ಕಾರದ ಪರವಾಗಿ ವಾದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts