More

    ಪಾನಿಪುರಿಗಾಗಿ ಬಸ್​​ ನಿಲ್ಲಿಸಿ ಕೆಲಸ ಕಳೆದುಕೊಂಡ ಬಸ್ ಚಾಲಕ!

    ಗುಜರಾತ್‌: ಕರ್ತವ್ಯದಲ್ಲಿರುವಾಗಲೇ ಬಸ್ ಚಾಲಕನೊಬ್ಬ ಪಾನಿಪುರಿ ತಿನ್ನುವುದಕ್ಕಾಗಿಯೇ ಬಸ್‌ನ್ನು ರಸ್ತೆ ಪಕ್ಕಾ ನಿಲ್ಲಿಸಿ ಈಗ ಕೆಲಸಕ್ಕೆ ಕುತ್ತು ತಂದುಕೊಂಡಿದ್ದಾನೆ. ಗುಜರಾತ್‌ನ ಅದಲಾಜ್ ಎಂಬಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸೋಶಿಯಲ್​ ಮೀಡಿಯಾ ತುಂಬಾ ವೈರಲ್​ ಆಗುತ್ತಿದೆ.

    ಬಿಆರ್‌ಟಿಎಸ್ ಬಸ್ ಚಾಲಕ ಬಸ್‌ ಪೂರ್ತಿ ತುಂಬಿದ್ದ ಜನರನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ರೆಸಿಡೆನ್ಶಿಯಲ್ ಸೊಸೈಟಿಯೊಂದರ ಮುಂದೆ ಬಸ್ ನಿಲ್ಲಿಸಿದ ಆತ ಸೀದಾ ಹೋಗಿ ಪಾನಿಪುರಿ ವಾಲಾನ ಮುಂದೆ ನಿಂತಿದ್ದಾನೆ. ಹೀಗಾಗಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ 10 ನಿಮಿಷ ವಿಳಂಬವಾಗಿದೆ.

    ಇದನ್ನೂ ಓದಿ: ನೀವು ಎಳನೀರು ಪ್ರಿಯರೇ..? ಹಾಗಿದ್ರೆ ಈ ಸುದ್ದಿ ಓದಿ…
    ಕರ್ತವ್ಯದ ನಡುವೆ ಬಸ್ ನಿಲ್ಲಿಸಿ ಪಾನಿಪುರಿ ತಿನ್ನಲು ಹೋದ ಆತನ ವರ್ತನೆ ಬಗ್ಗೆ ಸಿಟ್ಟಿಗೆದ್ದ ಪ್ರಯಾಣಿಕರು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕಳೆದ ಶನಿವಾರ ಈ ಘಟನೆ ನಡೆದಿದ್ದು, ಈತ ಪಾನಿಪುರಿ ತಿನ್ನುತ್ತಿರುವುದನ್ನು ಯಾರೂ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋದಿಂದಾಗಿ ಅಧಿಕಾರಿಗಳಿಗೆ ಈ ವಿಚಾರ ತಿಳಿದಿದ್ದು, ಬಸ್ ಚಾಲಕನಿಗೆ 1000 ಸಾವಿರ ರೂಪಾಯಿ ದಂಡ ವಿಧಿಸಿ ಅಮಾನತು ಮಾಡಿದ್ದಾರೆ.

    ಹೆಣ್ಣು ಮಗುವಿಗೆ ಜನ್ಮ ನೀಡಿದ ಸೀರಿಯಲ್ ನಟಿ ದಿವ್ಯಾ ಶ್ರೀಧರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts