More

    VIDEO| ಪ್ರವಾಹದ ನೀರಿನಲ್ಲಿ ಸಿಲುಕಿದ ಬಸ್​; ಜೀವ ಉಳಿಸಿಕೊಳ್ಳಲು ಪರದಾಡಿದ ಪ್ರಯಾಣಿಕರು

    ಲಖನೌ: ಕಳೆದ ಕೆಲ ದಿನಗಳಿಂದ ಉತ್ತರ ಭಾರತದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಹೆಚ್ಚುತ್ತಿದ್ದು, ಜನಜೋಈವನ ಸಂಪೂರ್ಣವಾಗಿ ಅಸ್ಯವ್ಯಸ್ತಗೊಂಡಿದೆ. ಇದೀಗ ಪ್ರವಾಹ ನೀರಿನಲ್ಲಿ ಬಸ್ಸೊಂದು ಸಿಲುಕಿ 25ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದ ಸ್ಥಿತಿ ತಲುಪಿರುವ ಘಟನೆ ಉತ್ತರಪ್ರದೇಶದ ಬಿಜ್ನೋರ್​ ಎಂಬ ಪ್ರದೇಶದಲ್ಲಿ ನಡೆದಿದೆ.

    ಕೊಟವಾಲಿ ಕಾಲೋಚಿತ ನದಿಯ ನೀರಿನ ಹರಿವು ಹೆಚ್ಚಳವಾದ ಪರಿಣಾಮ ಹರ್ದಿವಾರ್​-ಬಿಜ್ನೋರ್​ ನಡುವೆ ಸಂಚರಿಸುವ ಬಸ್​ ಮಂಡವಾಲಿ ಎಂಬ ಪ್ರದೇಶದಲ್ಲಿ ಪ್ರವಾಹದಲ್ಲಿ ಸಿಲುಕೊಂಡಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವುದು ಕಂಡು ಬರುತ್ತದೆ.

    ಇದನ್ನೂ ಓದಿ: ನಿರಂತರ ಮಳೆಯಿಂದಾಗಿ ಭೂ ಕುಸಿತ; ಮೃತರ ಸಂಖ್ಯೆ 21ಕ್ಕೆ ಏರಿಕೆ

    ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಪ್ರವಾಹದಲ್ಲಿ ಬಸ್​ ಸಿಲುಕಿದ್ದು, ಕೆಲ ಪ್ರಯಾಣಿಕರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಕಿಟಕಿ ಮೂಲಕ ಟಾಪ್​ ಮೇಲೆ ಹತ್ತಿದ್ದಾರೆ. ಇನ್ನು ಕೆಲವರು ಅಸಹಾಯಕ ಸ್ಥಿತಿಯಲ್ಲಿ ಬಸ್​ ಒಳಗೆ ಕುಳಿತಿರುವುದು ಕಂಡು ಬರುತ್ತದೆ.

    ಇತ್ತ ಸೇತುವೆ ಮೇಲೆ ಜನರು ಹಾಗೂ ರಕ್ಷಣಾ ಇಲಾಖೆ ಸಿಬ್ಬಂದಿ ಕ್ರೇನ್​ ಬಳಸಿ ಬಸ್​ ಪಲ್ಟಿಯಾಗದೆ ಇರದಂತೆ ತಡೆದಿದ್ದಾರೆ. ಇತ್ತ ಪ್ರಯಾಣಿಕರಯು ತಮನ್ನು ರಕ್ಷಿಸುವಂತೆ ಕೂಗಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts