More

    ಭಾರತ್​ ಬಂದ್​ನಿಂದಾಗಿ ವಧುವಿಗೆ ಸಂಕಷ್ಟ; ಹಸೆಮಣೆ ಏರೋದಕ್ಕೂ ಮುನ್ನ 2ಕಿ.ಮೀ ನಡೆಯೋ ಶಿಕ್ಷೆ!

    ಪಟನಾ: ಇಂದು ದೇಶದಾದ್ಯಂತ ರೈತರಿಗೆ ಬೆಂಬಲಿಸಿ ಭಾರತ್​ ಬಂದ್​ ನಡೆಸಲಾಗಿದೆ. ಕೆಲ ರಾಜ್ಯಗಳಲ್ಲಿ ಬಂದ್​ಗೆ ಉತ್ತಮ ಸ್ಪಂದನೆ ಸಿಕ್ಕಿದ್ದರೆ ಹಲವು ರಾಜ್ಯಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ. ಬಿಹಾರದ ಸಮಸ್ತಿಪುರದಲ್ಲಿ ಬಂದ್​ ಮಾಡಲಾಗಿದ್ದು, ಇದರಿಂದಾಗಿ ವಧುವೊಬ್ಬಳು 2 ಕಿ.ಮೀ ನಡೆದು ದೇವಸ್ಥಾನ ತಲುಪಬೇಕಾದ ಪರಿಸ್ಥಿತಿ ಉಂಟಾಗಿದೆ.

    ಇದನ್ನೂ ಓದಿ: ಅಮೆರಿಕದ ನಾಯಕರೊಂದಿಗೆ ರಾತ್ರಿ ಕಳೆದು ಚೀನಾಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ಬೆಡಗಿ!

    ಸಮಸ್ತಿಪುರ ನಗರದ ಬಹುಭಾಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೇ ಸಮಯದಲ್ಲಿ ಇಂದೇ ಹಸೆಮಣೆ ಏರಬೇಕಿದ್ದ ವಧುವೊಬ್ಬಳು, ಮದುವೆಗೂ ಮುನ್ನ ದೇವಸ್ಥಾನದಲ್ಲಿ ಪೂಜೆ ಮಾಡಿಸಲೆಂದು ಹೊರಟಿದ್ದಾಳೆ. ದೇವಸ್ಥಾನದ ಮೂರು ಕಿ.ಮೀ ಹಿಂದೆಯೇ ಆಕೆಯ ಗಾಡಿಗೆ ಅಡ್ಡ ಹಾಕಿ ಕಾರನ್ನು ನಿಲ್ಲಿಸಲಾಗಿದೆ. ನಂತರ ಆಕೆ ಕಾರಿನಿಂದ ಇಳಿದು, ನಡೆದೇ ದೇವಸ್ಥಾನಕ್ಕೆ ಹೊರಟಿದ್ದಾಳೆ. ವಧುಗೆ ಅನೇಕ ಮಹಿಳೆಯರು ಸಾಥ್​ ಕೊಟ್ಟಿದ್ದಾರೆ. 2 ಕಿ.ಮೀ ನಡೆದ ನಂತರ ಆಟೋ ಒಂದು ಸಿಕ್ಕಿದ್ದು ಅದರಲ್ಲಿ ವಧು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾಳೆ.

    ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಆಕೆ ನಂತರ ಮನೆಗೆ ಬಂದು ಹಸೆಮಣೆ ಏರಿರುವುದಾಗಿ ವರದಿಯಾಗಿದೆ. (ಏಜೆನ್ಸೀಸ್​)

    ಆನ್​ಲೈನ್​ ಕ್ಲಾಸ್​ಗೆಂದು ಮಗಳಿಗೆ ಮೊಬೈಲ್​ ಕೊಟ್ಟು ಕೆಟ್ಟ ತಂದೆ: ಅಶ್ಲೀಲ ವಿಡಿಯೋ ಪತ್ತೆ!

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts