ನವದೆಹಲಿ: ಲಡಾಖ್ನ ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗಿನ ಸಂಘರ್ಷದಲ್ಲಿ 20 ವೀರ ಯೋಧರು ಬಲಿಯಾಗಿದ್ದಾರೆ. ಇವರಲ್ಲಿ ಬಹುತೇಕರು ಬಿಹಾರ ರೆಜಿಮೆಂಟ್ಗೆ ಸೇರಿದವರು.
ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಚೀನಾದ 40ಕ್ಕೂ ಅಧಿಕ ಯೋಧರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಹುತಾತ್ಮ ಭಾರತೀಯ ಯೋಧರಲ್ಲಿ 13 ಜನರು ಬಿಹಾರ ರೆಜಿಮೆಂಟ್ಗೆ ಸೇರಿದವರಾಗಿದ್ದಾರೆ. ಅದರಲ್ಲೂ 12 ಜನರು 16 ಬಿಹಾರ್ ಬೆಟಾಲಿಯನ್ನವರು. ಕರ್ನಲ್ ಬಿ. ಸಂತೋಷ ಬಾಬು ಈ 12 ಜನರ ಪೈಕಿ ಒಬ್ಬರಾಗಿದ್ದಾರೆ. ಇನ್ನುಳಿದಂತೆ ಮೂವರು ಪಂಜಾಬ್ ರೆಜಿಮೆಂಟ್ಗೆ ಸೇರಿದವರು. ಇಬ್ಬರು ಮೀಡಿಯಂ ರೆಜಿಮೆಂಟ್ನವರು. ಫೀಲ್ಡ್ ರೆಜಿಮೆಂಟ್ ಹಾಗೂ ಎಂಬಿಎಸ್ಸಿಗೆ ಸೇರಿದ ತಲಾ ಒಬ್ಬ ಯೋಧ ವೀರ ಮರಣವನ್ನಪ್ಪಿದ್ದಾರೆ.
ಇದನ್ನೂ ಓದಿ; ಭಾರತಕ್ಕೆ ಪಾಕಿಸ್ತಾನಕ್ಕಿಂತಲೂ ದೊಡ್ಡ ಗಡಿ ತಂಟೆಕೋರ ಚೀನಾ….!
ಹುತಾತ್ಮ ಯೋಧರ ಪಟ್ಟಿ ಇಲ್ಲಿದೆ….
* ಕರ್ನಲ್ ಬಿಕುಮಲ್ಲಾ ಸಂತೋಷ್ ಬಾಬು- ಹೈದರಾಬಾದ್
* ಸುಬೇದಾರ್ ನುದುರಾಮ್ ಸೋರೆನ್- ಮಯೂರ್ಬಂಜ್
* ಸುಬೇದಾರ್ ಮನದೀಪ್ ಸಿಂಗ್- ಪಟಿಯಾಲಾ
* ಸುಬೇದಾರ್ ಸತ್ನಾಮ್ ಸಿಂಗ್- ಗುರುದಾಸ್ಪುರ್
* ಹವಾಲ್ದಾರ್ ಕೆ. ಪಳನಿ- ಮಧುರೈ
* ಹವಾಲ್ದಾರ್ ಸುನಿಲ್ಕುಮಾರ್- ಪಟನಾ
* ಹವಾಲ್ದಾರ್ ಬಿಪುಲ್ ರಾಯ್- ಮೀರತ್
* ದೀಪಕ್ಕುಮಾರ್- ರೇವಾ
* ಸಿಪಾಯಿ ರಾಜೇಶ್ ಓರಂಗ್- ಬಿರ್ಭೂಮ್
* ಸಿಪಾಯಿ ಕುಂದನ್ಕುಮಾರ್ ಒಝಾ- ಸಾಹೀಬ್ಗಂಜ್
* ಸಿಪಾಯಿ ಗಣೇಶ್ ರಾಮ್- ಕಾನ್ಕೆ
* ಸಿಪಾಯಿ ಚಂದ್ರಕಾಂತ್ ಪ್ರಧಾನ್- ಕಂದ್ಮಲ್
* ಸಿಪಾಯಿ ಅಂಕುಶ್- ಹಮಿರ್ಪುರ್
* ಸಿಪಾಯಿ ಗುಲ್ವಿಂದರ್- ಸಂಗ್ರೂರ್
* ಸಿಪಾಯಿ ಗುರುತೇಜ್ ಸಿಂಗ್- ಮಾನ್ಸಾ
* ಸಿಪಾಯಿ ಚಂದನ್ ಕುಮಾರ್- ಭೋಜ್ಪುರ್
* ಸಿಪಾಯಿ ಕುಂದನ್ಕುಮಾರ್- ಸಹರ್ಸಾ
* ಸಿಪಾಯಿ ಅಮನ್ಕುಮಾರ್- ಸಮಷ್ಟಿಪುರ
* ಸಿಪಾಯಿ ಜೈಕಿಶೋರ್ ಸಿಂಗ್- ವೈಶಾಲಿ
* ಸಿಪಾಯಿ ಗಣೇಶ್ ಹನ್ಸ್ದಾ ಪೂರ್ವ ಸಿಂಗ್ಭೂಮ್
ಇದನ್ನೂ ಓದಿ; ಮೌಂಟ್ ಎವರೆಸ್ಟ್ ಬುಡಕ್ಕೂ ಬಂತು ಚೀನಾ ಗಡಿ ತಂಟೆ ವಿವಾದ
ಇತ್ತೀಚಿನ ಬೆಳವಣಿಗೆಯಲ್ಲಿ ಚೀನಾ ಗ್ಯಾಲ್ವಾನ್ ಕಣಿವೆ ತನ್ನದೇ ಎಂದು ಮೊಂಡು ವಾದ ಮಂಡಿಸುತ್ತಿದೆ. ಇತ್ತೀಚಿನ ದಶಕಗಳಲ್ಲಿಯೇ ಇಂಥದ್ದೊಂದು ಬೇಡಿಕೆ ಚೀನಾದಿಂದ ಕೇಳಿಬಂದಿರುವುದು ಇದೇ ಮೊದಲಾಗಿದೆ.
ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್ಗಳಿದ್ದರೆ ಅಪಾಯ