More

    ಜಾತ್ರೆಯಲ್ಲಿ ಆಟವಾಡಲು ಹೋಗಿದ್ದ ಬಾಲಕ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವು

    ಚಿಕ್ಕಬಳ್ಳಾಪುರ: ಜಾತ್ರೆಯಲ್ಲಿ ಆಟವಾಡಲು ತೆರಳಿದ್ದ ಬಾಲಕ ಹಠಾತ್ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ಜಾತ್ರೆಯಲ್ಲಿ ನಡೆದಿದೆ.

    ಶಾಂತಿನಗರ ನಿವಾಸಿ ಮಂಜುನಾಥ್ ಅವರ ಪುತ್ರ ಶ್ರೇಯಸ್ (9) ಮೃತ ಬಾಲಕ. ಈತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಮುತ್ಯಾಲಮ್ಮ ಜಾತ್ರೆಗೆ ಹೋಗಿದ್ದ. ಆಟ ಆಡುತ್ತಿದ್ದ ವೇಳೆ ಬಾಲಕ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಹೃದಯಾಘಾತವಾಗಿ ಸಾವನ್ನಪಿರುವ ಶಂಕೆ ವ್ಯಕ್ತವಾಗಿದೆ.

    ಇದನ್ನೂ ಓದಿ: ಈ ನಾಲ್ಕು ಹೈಪ್ರೋಫೈಲ್ ಪ್ರಕರಣಗಳಿಗೆ ಮತ್ತೆ ಜೀವ ಬರುತ್ತಾ? ಅಧಿಕಾರಿಗಳೊಂದಿಗೆ ಇಂದು ಡಿಜಿಪಿ ಸಭೆ

    ಕಳೆದ ರಾತ್ರಿ ಪೋಷಕರ ಜೊತೆ ಜಾತ್ರೆಗೆ ಹೋಗಿದ್ದ ಬಾಲಕ.ಜಾತ್ರೆಯಲ್ಲಿ ಹಾಕಿದ್ದ ಅಮ್ಯೂಸ್ ಮೆಂಟ್ ಕ್ರೀಡೆಗಳಲ್ಲಿ ಭಾಗಿಯಾಗಿದ್ದ. ಕೂಡಲೇ ಆತನ ಪೋಷಕರು ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಇದು ರಿವರ್ಸ್ ಗೇರ್ ಸರ್ಕಾರ; ಬಸವರಾಜ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts