More

    ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ

    ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು ‘ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಗೆ ಕಥೆ ಹಾಗೂ ‘ಕಾದಂಬರಿ ಪುರಸ್ಕಾರ’ಕ್ಕೆ ಹಸ್ತಪ್ರತಿ ಆಹ್ವಾನಿಸಿದೆ.

    ಕಾದಂಬರಿ ಪುರಸ್ಕಾರವು ಒಂದು ಲಕ್ಷ ರೂ. ಒಳಗೊಂಡಿದೆ. ಆಯ್ಕೆಯಾದ ಕೃತಿಯ ಲೇಖಕರಿಗೆ 75 ಸಾವಿರ ರೂ. ಹಾಗೂ ಪ್ರಕಾಶಕರಿಗೆ 25 ಸಾವಿರ ರೂ.ನಂತೆ ಬಹುಮಾನ ನೀಡಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂ. ಸಿಗಲಿದೆ. ಇದರಲ್ಲಿಯೂ 3 ಸಾವಿರ ರೂ. ಲೇಖಕರಿಗೆ ಹಾಗೂ 2 ಸಾವಿರ ರೂ. ಪ್ರಕಾಶಕರಿಗೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

    ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕಥೆಗೆ 50 ಸಾವಿರ ರೂ. ನಗದು ಪುರಸ್ಕಾರ, ದ್ವಿತೀಯ ಸ್ಥಾನ ಪಡೆದ ಕಥೆಗೆ 25 ಸಾವಿರ, ತೃತೀಯ ಸ್ಥಾನ ಪಡೆದ ಕಥೆಗೆ 15 ಸಾವಿರ ರೂ. ಇರಲಿದೆ. ಉಳಿದಂತೆ ಐದು ಕಥೆಗಳಿಗೆ ತಲಾ 5 ಸಾವಿರ ರೂ. ನೀಡಲಾಗುತ್ತದೆ. ಅಂತಿಮ ಸುತ್ತಿಗೆ ಆಯ್ಕೆಯಾಗುವ 17 ಕಥೆಗಳಿಗೆ ತಲಾ 2 ಸಾವಿರ ರೂ. ನೀಡಲಾಗುತ್ತದೆ. ಆಯ್ಕೆಯಾದ 25 ಕಥೆಗಳನ್ನು ಒಳಗೊಂಡ ಪುಸ್ತಕ ಪ್ರಕಟಿಸಲಾಗುತ್ತದೆ.

    ಕಥೆ ಮತ್ತು ಕಾದಂಬರಿ ಪುರಸ್ಕಾರಕ್ಕೆ ನಾಲ್ಕು ಪ್ರತಿಗಳನ್ನು ಮೇ 1ರೊಳಗೆ ಕಳುಹಿಸಬೇಕು. ವಿಳಾಸ: ಪ್ರಧಾನ ಸಂಪಾದಕ, ಬುಕ್ ಬ್ರಹ್ಮ ಕನ್ನಡ, ಮೂರನೇ ಮಹಡಿ, ಆರ್.ಕೆ. ಕಾಂಪ್ಲೆಕ್ಸ್, ಕೆಎಸ್‌ಎಸ್‌ಐಡಿಸಿ ಆವರಣ, ಎಲೆಕ್ಟ್ರಾನಿಕ್ಸ್ ಸಿಟಿ ಮೊದಲ ಹಂತ, ಬೆಂಗಳೂರು-560100. ಹೆಚ್ಚಿನ ಮಾಹಿತಿಗೆ ದೂ: 78926 08118 ಸಂಪರ್ಕಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts