ಬೆಂಗಳೂರು: ಆತಿಥೇಯ ಕರ್ನಾಟಕ ತಂಡ 3ನೇ ಇಂಡಸ್ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ರಾಷ್ಟ್ರೀಯ ಟಿ20 ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ಗೇರಿದೆ. ಆರಂಭಿಕ ಪ್ರಕಾಶ್ ಜಯರಾಮಯ್ಯ (99*ರನ್, 48 ಎಸೆತ, 20 ಬೌಂಡರಿ) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಭಾನುವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 10 ವಿಕೆಟ್ಗಳಿಂದ ಭರ್ಜರಿ ಗೆಲುವು ದಾಖಲಿಸಿತು.
ಬೆಂಗಳೂರು ಹೊರವಲಯದಲ್ಲಿರುವ ಅಲ್ಟಾಯ್ರಾ ಮೈದಾನದಲ್ಲಿ ನಡೆದ 8ರ ಘಟ್ಟದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ 6 ವಿಕೆಟ್ಗೆ 169 ರನ್ ಪೇರಿಸಿತು. ಪ್ರತಿಯಾಗಿ ಕರ್ನಾಟಕ ತಂಡ 13.4 ಓವರ್ಗಳಲ್ಲೇ ವಿಕೆಟ್ ನಷ್ಟವಿಲ್ಲದೆ 173 ರನ್ ಬಾರಿಸಿ ಗೆಲುವು ಸಾಧಿಸಿತು. ಕಳೆದ ಎರಡೂ ಪಂದ್ಯಗಳಲ್ಲಿ ಶತಕ ಸಿಡಿಸಿ ಮಿಂಚಿದ್ದ ಪ್ರಕಾಶ್ ಜಯರಾಮಯ್ಯಗೆ ಮತ್ತೋರ್ವ ಆರಂಭಿಕ ಸಿ. ಉಮೇಶ್ (63*ರನ್, 36 ಎಸೆತ, 12 ಬೌಂಡರಿ) ಉತ್ತಮ ಸಾಥ್ ನೀಡಿದರು.
ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ಟಿ20 ಸರಣಿ ಸೋತ ದಕ್ಷಿಣ ಆಫ್ರಿಕಾ
ಕರ್ನಾಟಕ ತಂಡ ಸೋಮವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಒಡಿಶಾ ಸವಾಲು ಎದುರಿಸಲಿದೆ. ಆಂಧ್ರಪ್ರದೇಶ ಮತ್ತು ಹರಿಯಾಣ ತಂಡಗಳು ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಕ್ವಾರ್ಟರ್ಫೈನಲ್ ಕಾದಾಟದಲ್ಲಿ ಒಡಿಶಾ ತಂಡ ಜಾರ್ಖಂಡ್ ವಿರುದ್ಧ, ಆಂಧ್ರ ತಂಡ ಗುಜರಾತ್ ವಿರುದ್ಧ ಮತ್ತು ಹರಿಯಾಣ ತಂಡ ಕೇರಳ ವಿರುದ್ಧ ಗೆಲುವು ದಾಖಲಿಸಿತು.
ತಮಿಳುನಾಡು: 6 ವಿಕೆಟ್ಗೆ 169 (ಪಿ. ಅರುಣ್ ಕುಮಾರ್ 85*), ಕರ್ನಾಟಕ: 13.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 173 (ಪ್ರಕಾಶ್ ಜಯರಾಮಯ್ಯ 99*, ಸಿ. ಉಮೇಶ್ 63*).
ಐಪಿಎಲ್ ಹರಾಜಿಗೆ ಮುನ್ನ ಆಲ್ರೌಂಡ್ ಆಟವಾಡಿ ಮಿಂಚಿದ ಸಚಿನ್ ಪುತ್ರ ಅರ್ಜುನ್