ಚೆನ್ನೈ: ಏಪ್ರಿಲ್ 23ರಂದು ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 39ನೇ ಐಪಿಎಲ್ ಪಂದ್ಯದಲ್ಲಿ ಹಾಕಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ಗೆ ಕೆ.ಎಲ್. ರಾಹುಲ್ ಸಾರಥ್ಯದ ಲಖನೌ ಸೂಪರ್ಜೈಂಟ್ಸ್ ತಂಡವು ಮಾರ್ಕಸ್ ಸ್ಟೋಯಿನಿಸ್ ಶತಕದ ಬಲದಿಂದ ಸೋಲುಣಿಸುವಲ್ಲಿ ಯಶಸ್ವಿಯಾಗಿತ್ತು. ಪಂದ್ಯದ ಬಳಿಕ ಹಲವರು ಚೆನ್ನೈ ಸೂಪರ್ಕಿಂಗ್ಸ್ ಪ್ರದರ್ಶನದ ಬಗ್ಗೆ ಅಪಸ್ವರ ತೆಗೆದಿದ್ದು, ಇದೀಗ ಮಾಜಿ ಕ್ರಿಕೆಟಿಗರೊಬ್ಬರು ಚೆನ್ನೈ ಸೋಲಿಗೆ ಎಂ.ಎಸ್. ಧೋನಿ ಕಾರಣ ಎಂದು ದೂಷಿಸಿದ್ದಾರೆ.
ಚೆನ್ನೈ ಸೂಪರ್ಕಿಂಗ್ಸ್ ಸೋಲಿನ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು, ಬೃಹತ್ ಮೊತ್ತದ ಗುರಿ ನೀಡಿದರು ಚೆನ್ನೈ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ದುರದೃಷ್ಟಕರ ಸಂಗತಿ ಎಂದು ಹೇಳಲು ಬಯಸುತ್ತೇನೆ. ಇಲ್ಲಿ ಋತುರಾಜ್ ಅವರಿಗೆ ನಾಯಕತ್ವದ ಕೊರತೆ ಸ್ಪಷ್ಟವಾಗಿ ಕಾಣುತ್ತಿತ್ತು. ಏಕೆಂದರೆ ಡೆತ್ ಓವರ್ಗಳಲ್ಲಿ ಫೀಲ್ಡ್ ಪ್ಲೇಸ್ಮೆಂಟ್ ಮಾಡಿದ ರೀತಿ ಸರಿಯಾಗಿರಲಿಲ್ಲ ಮತ್ತು ಬೌಲಿಂಗ್ ಮಾಡಿದ ರೀತಿಯೂ ಅಷ್ಟಾಗಿ ಹೇಳಿಕೊಳ್ಳುವಂತಿರಲಿಲ್ಲ ಎಂದಿದ್ದಾರೆ.
ಇದಲ್ಲದೆ ಸುದ್ದಿ ಸಂಸ್ಥೆಯೊಂದರ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಅಂಬಾಟಿ ರಾಯುಡು ನಾನು ಸಿಎಸ್ಕೆ ಸೋಲಿಗೆ ಧೋನಿ ಕಾರಣ ಎಂದು ಎಲ್ಲಿಯೂ ಹೇಳಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಪಂದ್ಯ ನಡೆದ ದಿನ ನಾನು ಐಪಿಎಲ್ ಕಾಮೆಂಟರಿ ಬಾಕ್ಸ್ನಲ್ಲಿ ಇರಲಿಲ್ಲ. ಬದಲಾಗಿ ನನ್ನ ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದೆ ಎಂದು ಅಂಬಾಟಿ ರಾಯುಡು ಈ ವೇಳೆ ಸ್ಪಷ್ಟನೆ ನೀಡಿದ್ದಾರೆ.