More

    ಸಿಎಸ್​ಕೆ ಸೋಲಿಗೆ ಧೋನಿಯನ್ನು ದೂಷಿಸಿ; ಎಲ್​ಎಸ್​ಜಿ ವಿರುದ್ಧದ ಸೋಲಿಗೆ ಕಾರಣ ಬಿಚ್ಚಿಟ್ಟ ಮಾಜಿ ಕ್ರಿಕೆಟಿಗ

    ಚೆನ್ನೈ: ಏಪ್ರಿಲ್​ 23ರಂದು ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 39ನೇ ಐಪಿಎಲ್​ ಪಂದ್ಯದಲ್ಲಿ ಹಾಕಿ ಚಾಂಪಿಯನ್​ ಚೆನ್ನೈ ಸೂಪರ್​ಕಿಂಗ್ಸ್​​ಗೆ ಕೆ.ಎಲ್. ರಾಹುಲ್ ಸಾರಥ್ಯದ ಲಖನೌ ಸೂಪರ್​ಜೈಂಟ್ಸ್​ ತಂಡವು ಮಾರ್ಕಸ್​ ಸ್ಟೋಯಿನಿಸ್​ ಶತಕದ ಬಲದಿಂದ ಸೋಲುಣಿಸುವಲ್ಲಿ ಯಶಸ್ವಿಯಾಗಿತ್ತು. ಪಂದ್ಯದ ಬಳಿಕ ಹಲವರು ಚೆನ್ನೈ ಸೂಪರ್​ಕಿಂಗ್ಸ್​​ ಪ್ರದರ್ಶನದ ಬಗ್ಗೆ ಅಪಸ್ವರ ತೆಗೆದಿದ್ದು, ಇದೀಗ ಮಾಜಿ ಕ್ರಿಕೆಟಿಗರೊಬ್ಬರು ಚೆನ್ನೈ ಸೋಲಿಗೆ ಎಂ.ಎಸ್. ಧೋನಿ ಕಾರಣ ಎಂದು ದೂಷಿಸಿದ್ದಾರೆ.

    ಚೆನ್ನೈ ಸೂಪರ್​ಕಿಂಗ್ಸ್​ ಸೋಲಿನ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು, ಬೃಹತ್​ ಮೊತ್ತದ ಗುರಿ ನೀಡಿದರು ಚೆನ್ನೈ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ದುರದೃಷ್ಟಕರ ಸಂಗತಿ ಎಂದು ಹೇಳಲು ಬಯಸುತ್ತೇನೆ. ಇಲ್ಲಿ ಋತುರಾಜ್​ ಅವರಿಗೆ ನಾಯಕತ್ವದ ಕೊರತೆ ಸ್ಪಷ್ಟವಾಗಿ ಕಾಣುತ್ತಿತ್ತು. ಏಕೆಂದರೆ ಡೆತ್​ ಓವರ್​ಗಳಲ್ಲಿ ಫೀಲ್ಡ್​ ಪ್ಲೇಸ್​ಮೆಂಟ್​ ಮಾಡಿದ ರೀತಿ ಸರಿಯಾಗಿರಲಿಲ್ಲ ಮತ್ತು ಬೌಲಿಂಗ್​ ಮಾಡಿದ ರೀತಿಯೂ ಅಷ್ಟಾಗಿ ಹೇಳಿಕೊಳ್ಳುವಂತಿರಲಿಲ್ಲ ಎಂದಿದ್ದಾರೆ.

    ಇದಲ್ಲದೆ ಸುದ್ದಿ ಸಂಸ್ಥೆಯೊಂದರ ವರದಿ ಉಲ್ಲೇಖಿಸಿ ಟ್ವೀಟ್​ ಮಾಡಿರುವ ಅಂಬಾಟಿ ರಾಯುಡು ನಾನು ಸಿಎಸ್​ಕೆ ಸೋಲಿಗೆ ಧೋನಿ ಕಾರಣ ಎಂದು ಎಲ್ಲಿಯೂ ಹೇಳಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಪಂದ್ಯ ನಡೆದ ದಿನ ನಾನು ಐಪಿಎಲ್​ ಕಾಮೆಂಟರಿ ಬಾಕ್ಸ್​ನಲ್ಲಿ ಇರಲಿಲ್ಲ. ಬದಲಾಗಿ ನನ್ನ ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದೆ ಎಂದು ಅಂಬಾಟಿ ರಾಯುಡು ಈ ವೇಳೆ ಸ್ಪಷ್ಟನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts