ಬೆಳಗಾವಿ: ಖ್ಯಾತ ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿರುವುದು ಬಹಿರಂಗವಾಗಿದೆ. ಅದಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆಯ ಶಿವಾನಂದ ವಾಲಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಶಿವಾನಂದ ವಾಲಿ ಕಲ್ಯಾಣ್ ಪತ್ನಿ ಐಶ್ವರ್ಯಾ ಕುಟುಂಬದ ಪರಮಾಪ್ತ. ಆತನ ಅಕೌಂಟಿಗೆ ನನ್ನ ಪತ್ನಿ, ಅತ್ತೆ, ಮಾವನ ಅಕೌಂಟ್ನಿಂದ 19,80000 ರೂ.ವರ್ಗಾವಣೆ ಆಗಿದೆ ಎಂದು ಕಲ್ಯಾಣ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರು. ಅದರ ಅನ್ವಯ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ತಮ್ಮ ಖಾಸಗಿ ಅಂಗಗಳ ಬಗ್ಗೆ ಮುಕ್ತವಾಗಿ ಮಾತನಾಡಿ ನೆಟ್ಟಿಗರ ಹುಬ್ಬೇರಿಸಿದ ಗೋವಾ ಬ್ಯೂಟಿ ಇಲಿಯಾನಾ..!
ಇದೀಗ ಮತ್ತೊಂದು ವಿಚಾರ ಹೊರಬಿದ್ದಿದ್ದು, ಶಿವಾನಂದ್ ವಾಲಿ ಮನೆಯನ್ನು ತಪಾಸಣೆ ಮಾಡಿದಾಗ ಅಲ್ಲಿ ಲಿಂಬೆ ಹಣ್ಣು ಸೇರಿ, ಮಾಟಮಂತ್ರಕ್ಕೆ ಸಂಬಂಧಪಟ್ಟ ವಸ್ತುಗಳು ಸಿಕ್ಕಿವೆ ಎಂದು ಮಾಹಿತಿ ಲಭ್ಯವಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಕೆ. ಕಲ್ಯಾಣ್ ಕೂಡ ನನ್ನ ಅತ್ತೆ ಮನೆಯಲ್ಲಿ ಮಧ್ಯರಾತ್ರಿಯಲ್ಲಿ ಲಿಂಬೆ ಹಣ್ಣು ಇಟ್ಟು ಪೂಜೆ ಮಾಡಲಾಗುತ್ತಿತ್ತು ಎಂಬ ವಿಚಾರವನ್ನು ಹೇಳಿದ್ದಾರೆ.
15 ವರ್ಷದ ಬಾಲಕಿ, ಯುವಕ ನೇಣಿಗೆ ಶರಣು: ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿತ್ತು ಕೊನೆಯ ಪ್ರೀತಿಯ ಸಂದೇಶ