ಹೂವಿನಹಡಗಲಿ: ಬೇಡಿಕೆ ಈಡೇರಿಕೆಗಾಗಿ ಅಖಿಲ ಕರ್ನಾಟಕ ಇಂಜಿನಿಯರಿಂಗ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಕಣ್ಣಿಗೆ ಬಟ್ಟೆ ಕಟ್ಟಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಮನೆಗಳ ದಿಢೀರ್ ತೆರವು ಕಾರ್ಯಾಚರಣೆ -ರಾಮಕೃಷ್ಣ ಹೆಗಡೆ ನಗರದಲ್ಲಿ ಜೆಸಿಬಿ ಸದ್ದು – ಹಕ್ಕುಪತ್ರ ಸಿಗದ ಕೆಲವರ ಪ್ರತಿಭಟನೆ
ಬುಧವಾರ ಹೂವಿನಹಡಗಲಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರು ಅನಿರ್ದಿಷ್ಟಾವಧಿವರೆಗೆ ತರಗತಿಗಳನ್ನು ಬಹಿಷ್ಕರಿಸಿ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸಿ ನಾಲ್ಕುದಿನಗಳಾದರೂ ಸಂಬಂಧ ಪಟ್ಟವರು ಇತ್ತ ಕಡೆ ಬರದೆ ಇರುವುದರಿಂದ ಈ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.
ಬೇಡಿಕೆ ಈಡೆರಿಸುವವರಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಸಂಘದ ರಾಜ್ಯಾಧ್ಯಕ್ಷ ಜಿ.ಬಿ.ಮನುಕುಮಾರ, ಉಪನ್ಯಾಸಕರಾದ ಬಿ.ಕೊಟ್ರಬಸಪ್ಪ, ನಾಜಿಯಾ, ಉಮಾಪತಿ, ಅನುರಾಧ, ಶಂಕ್ರಮ್ಮ, ವಾಣಿಶ್ರೀ, ಪ್ರಿಯಾಂಕ, ಬಾನು, ರವಿನಾಯ್ಕ, ಛತ್ರಿನಾಯ್ಕ, ದೇವರಾಜ ಇತರರಿದ್ದರು.