ಲಖನೌ: ಆರೋಗ್ಯ ಶಿಬಿರವೊಂದಕ್ಕೆ ನೆರೆದಿದ್ದ ಜನರು ಬಿಜೆಪಿ ಸಂಸದ ಸಂಗಂ ಲಾಲ್ ಗುಪ್ತ ಅವರನ್ನು ಥಳಿಸಿ, ಪಕ್ಷದ ಇತರ ಕಾರ್ಯಕರ್ತರನ್ನು ತಳ್ಳಾಡಿರುವ ಘಟನೆ ಉತ್ತರಪ್ರದೇಶದ ಪ್ರತಾಪಗಡದಲ್ಲಿ ಶನಿವಾರ ನಡೆದಿದೆ. ಥಳಿತಕ್ಕೊಳಗಾಗಿ ತಮ್ಮ ಕಾರಿನಲ್ಲಿ ಸ್ಥಳದಿಂದ ತೆರಳುತ್ತಿದ್ದ ಸಂಸದರ ವಾಹನದ ಮೇಲೆ ಹಲವು ಜನರು ಕಲ್ಲು ತೂರಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಹಿರಿಯ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಮತ್ತು ಅವರ ಮಗಳು ಶಾಸಕಿ ಆರಾಧನಾ ಮಿಶ್ರ ಅವರೇ ಚಿತಾವಣೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಧರಣಿ ನಡೆಸಿದರು. ಸಂಜೆಯ ವೇಳೆಗೆ ಲಾಲ್ಗಂಜ್ ಪೊಲೀಸರು ಮಾಜಿ ಸಂಸದ ತಿವಾರಿ, ಶಾಸಕಿ ಮಿಶ್ರ ಮತ್ತು ಇನ್ನೂ 25 ಜನರ ವಿರುದ್ಧ ಕೊಲೆ ಯತ್ನ ಮತ್ತು ಇತರ ಆರೋಪಗಳೊಂದಿಗೆ ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಬಾಲಕ ತೇಜಸ್: ಕಣ್ಣೀರಲ್ಲಿ ಅಪ್ಪ-ಅಮ್ಮ
ಸರ್ಕಾರಿ ಕಾರ್ಯಕ್ರಮದಲ್ಲಿ ವ್ಯವಸ್ಥೆಗಳು ಸರಿಯಾಗಿಲ್ಲದ್ದರಿಂದ ಸಿಟ್ಟಿಗೆದ್ದು ಜನರೇ ಬಿಜೆಪಿ ಸಂಸದರ ವಿರುದ್ಧ ಘೋಷಣೆ ಕೂಗಿ ಓಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಮತ್ತೊಂದೆಡೆ, ರಾಜ್ಯದ ಡೆಪ್ಯುಟಿ ಸಿಎಂ ಕೇಶವಪ್ರಸಾದ್ ಮೌರ್ಯ ಅವರು, ಒಬ್ಬರು ತಪ್ಪಿತಸ್ಥರನ್ನೂ ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)
ಕರೊನಾ ವಿರುದ್ಧದ ಹೋರಾಟದಲ್ಲಿ ಟೀಂ ಇಂಡಿಯ ದಾಖಲೆಗಳನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ
ಅಫ್ಘನ್ ಮಹಿಳೆಯರು ಹಿಜಾಬ್ ತೊಡುವುದಿಲ್ಲ! ತಾಲಿಬಾನ್ ಕಟ್ಟಾವಾದಕ್ಕೆ ಟ್ರೆಂಡಿಂಗ್ ಉತ್ತರ