ಬೆಂಗಳೂರು: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.
ವಿಧಾನಸಬೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಪರಾಭವಗೊಂಡಿದ್ದ ಅಭ್ಯರ್ಥಿ ಒಬ್ಬರಿಗೆ ಲಘು ಹೃದಯಾಘಾತವಾಗಿರುವ ಸಂಗತಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರಾಜ್ಯ ವಿಧಾನಸಭೆ ಚುನಾವಣೆ; ಗೆದ್ದು ಬೀಗಿದ ತಂದೆ-ಮಕ್ಕಳು ಯಾರ್ಯಾರು ಗೊತ್ತಾ?
ಲಘು ಹೃದಯಾಘಾತ
ವಿಜಯನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್. ರವೀಂದ್ರ ಅವರಿಗೆ ಲಘುವಾಗಿ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ಧಾರೆ.
ಸತತ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ನ ಎಂ. ಕೃಷ್ಣಪ್ಪ ಎದುರು ಸ್ಪರ್ಧಿಸಿ ಪರಭಾವಗೊಂಡಿರುವ ರವೀಂದ್ರ ಅವರು ಈ ಭಾರಿ ಎದುರಾಳಿಯೊಂದಿಗೆ ನೇರ ಹಣಾಹಣಿ ನಡೆಸಿ 7,324 ಸಾವಿರ ಮತಗಳ ಅಂತರದಲ್ಲಿ ಸೋಲುಂಡಿದ್ದಾರೆ.