ಜೈಪುರ: ರಾಜಸ್ಥಾನ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಒಂದೆಡೆ ಕಾಂಗ್ರೆಸ್ನಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಬಣಗಳ ನಡುವಿನ ಹೋರಾಟ ಹೈಕೋರ್ಟ್ ಮೆಟ್ಟಿಲೇರಿದೆ.
ಈಗ ಇನ್ನೊಂದೆಡೆ ಬಿಜೆಪಿಯ ಮೈತ್ರಿ ಪಕ್ಷ ವಸುಂಧರಾ ರಾಜೆ ಅವರ ವಿರುದ್ಧವೇ ಗಂಭೀರ ಆರೋಪ ಮಾಡಿದೆ. ಬಿಜೆಪಿ ಮೈತ್ರಿ ಪಕ್ಷವಾದ ರಾಷ್ಟ್ರೀಯ ಲೋಕ್ತಾಂತ್ರಿಕ್ ಪಾರ್ಟಿ ಅಧ್ಯಕ್ಷ ಹನುಮಾನ್ ಬೆನಿವಾಲ್ ಅವರು ಟ್ವೀಟ್ ಮೂಲಕ ರಾಜಸ್ಥಾನ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಪ್ರಮುಖ ನಾಯಕಿ ವಸುಂಧರಾ ರಾಜೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ವಸುಂಧರಾ ರಾಜೆ ಅವರು ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹನುಮಾನ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕರೊನಾ ಮಣಿಸಿ ಮನೆಗೆ ಮರಳಿದ 103 ವರ್ಷದ ಅಜ್ಜಿಗೆ ಎದುರಾಗಿದ್ದು ನೋವು; ಸಂಕಟ ತೋಡಿಕೊಂಡ ಮೊಮ್ಮಗಳು
ರಾಜೆ ಹಾಗೂ ಗೆಹ್ಲೋಟ್ಗೆ ತಮ್ಮಿಬ್ಬರ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಬೇಕಾದರೆ ಪರಸ್ಪರ ಸಹಕಾರ ಕೊಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ವಸುಂಧರಾ ರಾಜೆ ಅವರು ಕಾಂಗ್ರೆಸ್ ಶಾಸಕರನ್ನು ಕರೆದು, ಪ್ರತಿಯೊಬ್ಬರೂ ಅಶೋಕ್ ಗೆಹ್ಲೋಟ್ ಅವರಿಗೆ ಬೆಂಬಲ ನೀಡುವಂತೆ ಸೂಚಿಸಿದ್ದಾರೆ. ರಾಜೆ ಅವರು ಹೀಗೆ ಮಾಡಿದ್ದಾರೆ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದು ಹನುಮಾನ್ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟುಗಳ ಮಧ್ಯೆ ಬಿಜೆಪಿ ಎರಡು ಮೂರು ಸಭೆಗಳನ್ನು ಕರೆದಿತ್ತು. ವಸುಂಧರಾ ರಾಜೆಯವರಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅವರು ಒಂದೂ ಸಭೆಗೆ ಆಗಮಿಸಿರಲಿಲ್ಲ. ಇದರ ಬೆನ್ನಲ್ಲೇ ಹನುಮಾನ್ ಬೆನಿವಾಲ್ ಈ ಹೊಸ ಬಾಂಬ್ ಸಿಡಿಸಿದ್ದಾರೆ. (ಏಜೆನ್ಸೀಸ್)
ಎನ್ಕೌಂಟರ್ಗೆ ಬಲಿಯಾದ ವಿಕಾಸ್ ದುಬೆ ಸಹಚರನ ವಯಸ್ಸು ಕೇವಲ ಹದಿನಾರು; ಪಿಯುಸಿನಲ್ಲಿ ಫಸ್ಟ್ ಕ್ಲಾಸ್…!