ಭೋಪಾಲ್: ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್ ಹಾಗೂ ಮಧುಲಿಕಾ ರಾವತ್ ದಂಪತಿ ಸೇರಿ 13 ಮಂದಿ ಸಾವಿಗೀಡಾಗಿ ಕೆಲವೇ ದಿನಗಳಷ್ಟೇ ಆಗಿವೆ. ಈ ದುಃಖದ ಮಧ್ಯೆ ಬಿಪಿನ್ ರಾವತ್ ಅವರ ಸಂಬಂಧಿಕರ ಪೂರ್ವಜರ ಸಮಾಧಿಗೆ ಹಾನಿಯಾಗಿದೆ ಎಂಬ ವಿಷಯ ಬಹಿರಂಗಗೊಂಡಿದೆ. ಮಾತ್ರವಲ್ಲ, ಈ ಕುರಿತು ಯಶ್ ವರ್ಧನ್ ಸಿಂಗ್ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಧುಲಿಕಾ ರಾವತ್ ಅವರ ಸಹೋದರ ಯಶ್ ವರ್ಧನ್ ಸಿಂಗ್ ಅವರು ತಮ್ಮ ಪೂರ್ವಜರ ಸಮಾಧಿ ಸ್ಥಳಕ್ಕೆ ಹಾನಿಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಹೊರಿಸಿದ್ದಾರೆ. ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಸುಹಾಗ್ಪುರದಲ್ಲಿರುವ ತಮ್ಮ ಆಸ್ತಿಗೆ ಸಮೀಪದಲ್ಲಿ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಈ ಹಾನಿಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಎಚ್ಚರ.. ಎಚ್ಚರ.. ಹೊರಗೆಲ್ಲೂ ಹೋಗದವರಿಗೂ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೂ ಬಂದಿದೆ ಒಮಿಕ್ರಾನ್!
ಸಹೋದರಿ ಮತ್ತವರ ಪತಿಯ ಅಂತಿಮಸಂಸ್ಕಾರ ಸಲುವಾಗಿ ದೆಹಲಿಯಲ್ಲಿದ್ದ ಸಮಯದಲ್ಲಿ ಬುಲ್ಡೋಜರ್ ಮೂಲಕ ಹಿರಿಯರ ಸಮಾಧಿ ಸ್ಥಳಕ್ಕೆ ಹಾನಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಮಾತ್ರವಲ್ಲ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಪಡಿಸಿದರೆ ಕೇಸು ದಾಖಲಿಸುವುದಾಗಿಯೂ ಬೆದರಿಕೆ ಬಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ಕುರಿತು ಶಹದೋಲ್ ಜಿಲ್ಲಾಧಿಕಾರಿ ವಂದನಾ ವೈದ್ಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಯಶ್ ವರ್ಧನ್ ಸಿಂಗ್ ಅವರು 2016ರಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಅವರ ಜಾಗದ ಒಂದು ಭಾಗವನ್ನು ಕೊಟ್ಟಿದ್ದು, ಅದಕ್ಕೆ ಪರಿಹಾರವಾಗಿ 2.77 ಲಕ್ಷ ರೂಪಾಯಿ ಪಡೆದಿದ್ದಾರೆ. ನಂತರ ರಸ್ತೆ ಅಗಲೀಕರಣ ಸಲುವಾಗಿ ಮತ್ತಷ್ಟು ಜಾಗದ ಅವಶ್ಯಕತೆ ಇದ್ದಿದ್ದರಿಂದ 0.56 ಹೆಕ್ಟೇರ್ ಜಾಗ ಸ್ವಾಧೀನಕ್ಕಾಗಿ ನೋಟಿಫಿಕೇಷನ್ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅನಿವಾರ್ಯವಾಗಿ ಬೆಂಗಳೂರಿಗೆ ಬಂದಿಳಿದ ವಿಮಾನ, ತೆರೆದುಕೊಳ್ಳದ ಬಾಗಿಲು, ನಟಿ ರೋಜಾ ಸೇರಿ 70ಕ್ಕೂ ಅಧಿಕ ಪ್ರಯಾಣಿಕರ ಪರದಾಟ!
ಇದು ನಾನು ಇಲ್ಲಿಗೆ ಕರ್ತವ್ಯಕ್ಕೆ ಹಾಜರಾಗುವ ಮೊದಲೇ ಆಗಿದ್ದು, ಹೆದ್ದಾರಿ ನಿರ್ಮಾಣಕ್ಕಾಗಿ ಒಂದಷ್ಟು ಮರಗಳನ್ನು ಕಡಿಯಲಾಗಿತ್ತು. ಆ ಬಳಿಕ ಮತ್ತಷ್ಟು ಮರಗಳನ್ನು ಕಡಿದಿದ್ದೇ ಸಂಘರ್ಷಕ್ಕೆ ಕಾರಣವಾಗಿದೆ. ಇನ್ನು ಸಮಾಧಿ ಇದ್ದ ಸ್ಥಳದ ಒಂದು ಭಾಗವೂ ಹೆದ್ದಾರಿ ನಿರ್ಮಾಣಕ್ಕೆ ನೀಡಲಾಗಿದ್ದ ಜಾಗಕ್ಕೆ ಸೇರಿದೆ. ಆದರೆ ಅಲ್ಲಿ ಒಂದಷ್ಟು ಪೊದೆ ಇದ್ದಿದ್ದರಿಂದ ಕಾರ್ಮಿಕರು ಗೊತ್ತಾಗದೆ ಅಲ್ಲಿ ಅಗೆದಿದ್ದಾರೆ. ಈ ಬಗ್ಗೆ ತಾವು ಯಶ್ ವರ್ಧನ್ ಜತೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ದೆಹಲಿಯಿಂದ ಬರುತ್ತಿದ್ದಂತೆ ಭೇಟಿಯಾಗಲು ಹೇಳಿದ್ದೇನೆ ಎಂಬುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದು ‘ಎಣ್ಣೆ-ಏಟು’: ಪಾನಮತ್ತ ಚಾಲಕ, ಕೋಪೋದ್ರಿಕ್ತ ಮಾಲೀಕ; ಮುಂದಾಗಿದ್ದೆಲ್ಲ ವೈರಲ್!