ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಬಯೋಪಿಕ್ ನಿರ್ಮಾಣ ಮಾಡಲು ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಒಂದು ಪ್ರಯತ್ನ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ವರ್ಷ ಸಿದ್ದು ಅವರ ಜೀವನ ಚರಿತ್ರೆ ತೆರೆಯ ಮೇಲೆ ಅಪ್ಪಳಿಸಲಿದೆ.
ಇದನ್ನೂ ಓದಿ: ಸುಳ್ಳು ಎಷ್ಟೇ ದೊಡ್ಡದಾಗಿದ್ದರೂ, ಸತ್ಯದ ಮುಂದೆ ಯಾವತ್ತೂ ಚಿಕ್ಕದು; ಲ್ಯಾಪಿಡ್ಗೆ ಖೇರ್ ತಿರುಗೇಟು
ಅಂದಹಾಗೆ, ಸಿದ್ದರಾಮಯ್ಯ ಅವರ ಬಯೋಪಿಕ್ ನಿಮಾಧಣ ಮಾಡಲು ಮುಂದಾಗಿರುವುದು ಗಂಗಾವತಿ ಮೂಲದ ಹಯಾತ್ ಪೀರ್ ಸಾಬ್. ಅವರು ತಮ್ಮ ಎಂ.ಎಸ್. ಕ್ರೀಯೆಷನ್ಸ್ ಸಂಸ್ಥೆಯಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಮಾಜಿ ಸಚಿವ ಶಿವರಾಜ್ ತಂಗಡಗಿ ಹಾಗೂ ಜಮೀರ್ ಆಹ್ಮಮದ್ ನೇತೃತ್ವದಲ್ಲಿ ಮೊದಲ ಸುತ್ತಿನ ಮಾತುಕತೆ ನಡೆದಿದ್ದು, ಸಿದ್ದರಾಮಯ್ಯ ಅವರಿಂದಲೂ ಬಯೋಪಿಕ್ ಚಿತ್ರಕ್ಕೆ ಗ್ರಿನ್ ಸಿಗ್ನಲ್ ಸಿಕ್ಕಿದೆಯಂತೆ.
ಇದನ್ನೂ ಓದಿ: ವಿಜಯಾನಂದ ಟ್ರೇಲರ್ ವೈರಲ್; ಯೂಟ್ಯೂಬ್ನಲ್ಲಿ 2.66 ಕೋಟಿಗೂ ಅಧಿಕ ವೀಕ್ಷಣೆ
ಸುಮಾರು 50 ಕೋಟಿಗೂ ಹೆಚ್ವು ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಸಿದ್ದರಾಮಯ್ಯ ಅವರ ಪಾತ್ರಕ್ಕೆ ತಮಿಳು ನಟ ವಿಜಯ್ ಸೇತುಪತಿ ಅವರ ಕಾಲ್ಶೀಟ್ ಕೇಳುವ ಸಾಧ್ಯತೆ ಇದೆ. ಸತ್ಯರತ್ನಂ ಎಂಬುವವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆಯಂತೆ.
‘ದಿ ಕಾಶ್ಮೀರ್ ಫೈಲ್ಸ್’ ಅಸಭ್ಯವಷ್ಟೇ ಅಲ್ಲ, ಕೆಟ್ಟ ಸಿನಿಮಾ … ಇಸ್ರೇಲಿ ನಿರ್ಮಾಪಕನ ವಿವಾದಾಸ್ಪದ ಹೇಳಿಕೆ