ಗುರುಪುರ: ಬಜ್ಪೆ ಸಮೀಪದ ಸುಂಕದಕಟ್ಟೆ ಬಳಿ ಖಾಸಗಿ ಬಸ್ನ ಓವರ್ಟೇಕ್ ಭರಾಟೆಗೆ ಬೈಕ್ ಸವಾರನೊಬ್ಬ ಸಿಲುಕಿ ಮೃತಪಟ್ಟ ಘಟನೆ ಗುರುವಾರ ಸಾಯಂಕಾಲ ನಡೆದಿದೆ.
ಮೂಲತಃ ಹಾವೇರಿ ಜಿಲ್ಲೆಯ ಅಭಿಷೇಕ್ ಕೊಟ್ರೇಶಿ(20) ಮೃತಪಟ್ಟವರು. ಇವರು ಮಂಗಳೂರಿನ ಖಾಸಗಿ ಕೊರಿಯರ್ ಸಂಸ್ಥೆಯೊಂದರಲ್ಲಿ 5 ವರ್ಷಗಳಿಂದ ಡೆಲಿವರಿ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಗುರುವಾರ ಸಾಯಂಕಾಲ ಬೈಕ್ನಲ್ಲಿ ಬಜ್ಪೆಯಿಂದ ಗುರುಪುರ ಕೈಕಂಬದತ್ತ ತೆರಳುತ್ತಿದ್ದಾಗ ಬಜ್ಪೆ ಪೊಲೀಸ್ ಠಾಣೆ ಹಾಗೂ ಸುಂಕದಕಟ್ಟೆ ಮಧ್ಯೆ ಎದುರಿನಿಂದ ಓವರ್ಟೇಕ್ ಮಾಡಿಕೊಂಡು ಬರುತ್ತಿದ್ದ ಬಸ್ ಡಿಕ್ಕಿಯಾಗಿದೆ. ರಸ್ತೆಗೆ ಬಿದ್ದ ಅಭಿಷೇಕ್ ಅವರಿಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲಿದ್ದ ಹಿಂದು ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹರೀಶ್ ಮಟ್ಟಿ ತಮ್ಮ ಕಾರಿನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.