ಬೆಂಗಳೂರು: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪೆಇಲ್ ಮುಕ್ತಾಯದ ಹಂತಕ್ಕೆ ಬಂದಿದ್ದು, ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಗೆ ಮೇ 26ರಂದು ವರ್ಣರಂಜಿತ ತೆರೆ ಬೀಳಲಿದೆ. 17ನೇ ಆವೃತ್ತಿಯ ಐಪಿಎಲ್ನಲ್ಲಿ ಹೊಸ ಅಧ್ಯಾಯವನ್ನು ಸತತ ಸೋಲುಗಳಿಂದ ಶುರು ಮಾಡಿ ಭರ್ಜರಿ ಕಮ್ಬ್ಯಾಕ್ ಮಾಡಿದ ಆರ್ಸಿಬಿ ತಂಡವು ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.
ಇನ್ನೂ ಆರ್ಸಿಬಿ ತಂಢದ ಆಟಗಾರ ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಿಸಿದ್ದು, ಫಿನಿಶರ್ ಆಗಿ ಹೆಚ್ಚು ಖ್ಯಾತಿ ಪಡೆದಿದ್ದರು. ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದ ದಿನೇಶ್ ನಿವೃತ್ತಿಯ ಬಳಿಕ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದು, ಆರ್ಸಿಬಿ ಅಭಿಮಾನಿಗಳನ್ನು ಹಾಡಿಹೊಗಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಭೀಕರ ರಸ್ತೆ ಅಪಘಾತ; ಕಲಬುರಗಿ ಮೂಲದ ಮೂವರು ಭಕ್ತರು ಸಾವು
ಆರ್ಸಿಬಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ದಿನೇಶ್ ಕಾರ್ತಿಕ್, ಆರ್ಸಿಬಿ ತಂಡವು ಅಸಾಧಾರಣವಾಗಿದ್ದು, ಆರ್ಸಿಬಿ ಎಂದರೆ ನನ್ನ ಪ್ರಕಾರ ಅದು ಅಭಿಮಾನಿಗಳು ಎಂದು ಹೇಳುತ್ತೇನೆ. ನಾನು ಆರ್ಸಿಬಿ ಬಗ್ಗೆ ಯೋಚಿಸಿದಾಗ ಮೊದಲಿಗೆ ನನ್ನ ತಲೆಗೆ ಬರುವುದು ಅಭಿಮಾನಿಗಳು. ಅಭಿಮಾನಿಗಳು ಆರ್ಸಿಬಿಯ ದೊಡ್ಡ ಭಾಗವಾಗಿದ್ದು, ವಿರಾಟ್ ಕೊಹ್ಲಿಗಿಂತ ಇವರೇ ದೊಡ್ಡವರು. 2022ರಲ್ಲಿ ನಡೆದ ಟಿ-20 ವಿಶ್ವಕಪ್ನಲ್ಲಿ ನಾನು ಆಡಿದ್ದೇನೆ ಎಂದರೆ ಅದಕ್ಕೆ ಕಾರಣ ಆರ್ಸಿಬಿ ಅಭಿಮಾನಿಗಳು ಎಂದು ಹೇಳಲು ಬಯಸುತ್ತೇನೆ.
ನಾನು ಕೆಲ ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡದಿದ್ದಾಗ. ನಾನು ಪುನರಾಗಮನ ಮಾಡುವಲ್ಲಿ ಆರ್ಸಿಬಿ ಅಭಿಮಾನಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಆರ್ಸಿಬಿ ಅಭಿಮಾನಿಗಳಿಗೆ ವಿಶೇಷ ಸ್ಥಾನವಿದ್ದು, ಅವರು ನೀಢಿರುವ ಬೆಂಬಲ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.