ಬಿಗ್ ಬಾಸ್ ಮನೆಯ ಸ್ಟ್ರಾಂಗೆಸ್ಟ್ ಸ್ಪರ್ಧಿ ಆಗಿರುವ ತನಿಷಾ, ಇಂದಿಗೆ ತಮ್ಮ ಬಿಗ್ ಬಾಸ್ ಮನೆಯ ಪಯಣವನ್ನು ಮುಗಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿಯು ಪ್ರೋಮೋ ಬಿಡುಗಡೆ ಮಾಡಿದ್ದು, ತನಿಷಾ ಕಣ್ಣೀರು ಹಾಕುತ್ತಾ ಇತರ ಸ್ಪರ್ಧಿಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವುದನ್ನು ಕಾಣಬಹುದಾಗಿದೆ.
ಮಿಡ್ ವೀಕ್ನಲ್ಲಿಯೇ ಎಲಿಮಿನೇಷನ್ ಪ್ರಕ್ರಿಯೆ ನಡೆಸಿದ್ದು, ಎಲ್ಲರನ್ನು ಗಾರ್ಡನ್ ಏರಿಯಾಗೆ ಕರೆಸಿದ್ದಾರೆ, ಈ ಸಂದರ್ಭದಲ್ಲಿ ಬಿಗ್ ಬಾಸ್ ಸೂಚಿಸುವ ಸ್ಪರ್ಧಿ ಮನೆಯ ಮುಖ್ಯದ್ವಾರದ ಮೂಲಕ ಹೊರಬರಬೇಕು ಎಂದು ಆದೇಶ ನೀಡಿದ್ದಾರೆ.
ಇನ್ನು ತನಿಷಾ ಅವರ ಪಯಣ ಬಿಗ್ ಬಾಸ್ ಮನೆಯಲ್ಲಿ ಇಲ್ಲಿಗೆ ಮುಕ್ತಾಯವಾಗಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇದರಿಂದ ಕಣ್ಣೀರು ಹಾಕಿದ ತನೀಷಾ, “ನೀವೆಲ್ಲಾ ತುಂಬಾ ಆಸೆ ಪಟ್ಟಿದ್ರಲ್ಲಾ ನಾನು ಆಚೆ ಹೋಗ್ಬೇಕು ಅಂತಾ… ಯಾಕೆ ಬಿಗ್ ಬಾಸ್… ನನ್ನ ವಾಯ್ಸ್ ನಿಮಗೆಲ್ಲಾ ಕಿರಿಕಿರಿ ಮಾಡ್ತಿತ್ತಲ್ಲಾ…ಇನ್ಮೇಲ್ ನನ್ನ ವಾಯ್ಸ್ ನಿಮಗೆ ಯಾರಿಗೂ ಇರಿಟೇಟ್ ಮಾಡಲ್ಲ” ಎನ್ನುತ್ತಾ ಕಣ್ಣೀರು ಸುರಿಸಿದ್ದಾರೆ.
ಮತ್ತೊಂದೆಡೆ ಸೋಷಿಯಲ್ ಮಿಡಿಯಾದಲ್ಲಿ ತನಿಷಾ ಔಟ್ ಆಗಿಲ್ಲ. ಆಕೆಯನ್ನ ಸೀಕ್ರೆಟ್ ರೂಮ್ನಲ್ಲಿ ಇರಿಸಲಾಗಿದೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ತನಿಷಾ ನಮ್ರತಾ ಅವರಿಗಿಂತಲೂ ಸಖತ್ ಆಗಿ ಪರ್ಫಾರ್ಮ್ ಮಾಡಿದ್ದಾರೆ.
ಹಾಗಾಗಿ ತನಿಷಾ ವಿಚಾರದಲ್ಲಿ ಬಿಗ್ ಬಾಸ್ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತನಿಷಾ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಣದೆಡೆ ನೊಂದ ತನಿಷಾ ಪ್ರೋಮೋನಲ್ಲಿ ಅಳುತ್ತಿರೋದನ್ನೂ ಕಾಣಬಹುದು.