More

    ಮಲೆನಾಡಿಗೆ ಭೂಪಾಳಂ ಕೊಡುಗೆ ಅಪಾರ

    ಶಿವಮೊಗ್ಗ: ಮಲೆನಾಡಿನ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಹಾಗೂ ಲಿಂಗನಮಕ್ಕಿ ಯೋಜನೆಯ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸ್ವಾತಂತ್ರೃ ಹೋರಾಟಗಾರ ಭೂಪಾಳಂ ಚಂದ್ರಶೇಖರಯ್ಯ ದೊಡ್ಡ ಮಟ್ಟದ ಪ್ರಯತ್ನ ನಡೆಸಿದ್ದರು. ಹೋರಾಟವನ್ನೂ ರೂಪಿಸಿದ್ದರು ಎಂದು ಸಾಹಿತಿ ಬಿ.ಚಂದ್ರೇಗೌಡ ಹೇಳಿದರು.

    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಸೋಮವಾರ ಏರ್ಪಡಿಸಿದ್ದ ಭೂಪಾಳಂ ಆರ್.ಚಂದ್ರಶೇಖರಯ್ಯ ಕುರಿತ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಗಾಂಧೀಜಿ ಹೇಳಿದ್ದನ್ನು ಇಲ್ಲಿ ಅನುಷ್ಠಾನ ಮಾಡುತ್ತಿದ್ದ ಭೂಪಾಳಂ ಚಂದ್ರಶೇಖರಯ್ಯ, ದಲಿತರ ಕೇರಿಗೆ ಹೋಗಿ ಅವರಿಗೆ ಶಿಕ್ಷಣ ನೀಡಿದ್ದರು ಎಂದು ನೆನಪಿಸಿಕೊಂಡರು.
    ನಮ್ಮ ಸುತ್ತಲಿನ ಪರಿಸರ ಉಳಿಸಿಕೊಳ್ಳಿವಲ್ಲಿ ನಾವು ವಿಫಲರಾಗಿದ್ದು, ಅದರ ಪರಿಣಾಮ ಎದುರಿಸುತ್ತಿದ್ದೇವೆ. ನೂರು ವರ್ಷದ ಇತಿಹಾಸವಿರುವ ಕಾರ್ಖಾನೆ ಉಳಿಸಲು ನಮ್ಮ ರಾಜಕಾರಣಕ್ಕೆ ಧ್ವನಿಯಿಲ್ಲವಾಗಿರುವುದು ದುರಂತ. ಸ್ವಚ್ಚತಾ ಜಾಗೃತಿ, ಅಸ್ಪಶ್ಯತೆ ತೊಲಗಿಸುವ ಪ್ರಯತ್ನ ಮಾಡುವ ಜತೆಗೆ ಸಾಮಾಜಿಕ, ಸ್ವಾತಂತ್ರೃ ಚಳುವಳಿಗೆ ಭೂಪಾಳಂ ಕೊಡುಗೆ ಅಪಾರ ಎಂದು ಬಣ್ಣಿಸಿದರು.
    ಕುವೆಂಪು ಅವರ ಬಾಲ್ಯದ ಗೆಳೆಯರಾಗಿದ್ದ ಅವರು ಪ್ರತಿಭಾವಂತರಾಗಿದ್ದರು. ಕುಪ್ಪಳಿಗೆ ಕುವೆಂಪು ಬಂದಿರುವ ಸುದ್ದಿ ಕೇಳಿ ತೀರ್ಥಹಳ್ಳಿಯಿಂದ ಬೈಸಿಕಲ್ ಹೊಡೆದುಕೊಂಡು ಹೋಗುತ್ತಿದ್ದರು. ಬರೆಯುವ, ಓದುವ ಹವ್ಯಾಸ ರೂಢಿಸಿಕೊಂಡಿದ್ದರಿಂದ ಮಲೆನಾಡು ವಾರ್ತಾ ಪತ್ರಿಕೆ ನಡೆಸಿದ್ದು, ಕುವೆಂಪು ಅವರ ರಾಮಾಯಣವನ್ನು ಸರಳವಾಗಿ ವಚನ ಭಾಷೆಯಲ್ಲಿ ಭಾಷಾಂತರ ಮಾಡಿದ್ದರು ಎಂದು ತಿಳಿಸಿದರು.
    ಭೂಪಾಳಂ ಶಶಿಧರ ಮಾತನಾಡಿ, ಭೂಪಾಳಂ ಆರ್.ಚಂದ್ರಶೇಖರಯ್ಯ ಅವರ ಕುಟುಂಬದ ಸದಸ್ಯರು ನಾವು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಅವರ ಸೇವೆ ಸ್ಮರಣೀಯ ಎಂದರು.
    ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಿದ್ದಿ ಬುದ್ದಿ ದೇವಸ್ಥಾನ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಟಿ.ವಿ.ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್, ಎನ್‌ಇಎಸ್ ನಿರ್ದೇಶಕ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಉದ್ಯಮಿ ಶಿವಸ್ವಾಮಿ ಭೂಪಾಳಂ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts