ಮುಂಬೈ: ಭಾರತದಲ್ಲಿ ಕಳೆದ ಎರಡು ವರ್ಷಗಳಿಂದ ಸಿನಿಮಾ ಸೆಲೆಬ್ರಿಟಿಗಳಿಗೆ ನಡುಕ ಹುಟ್ಟಿಸಿದೆ ಎನ್ಸಿಬಿ. ಎನ್ಸಿಬಿ ಅಧಿಕಾರಿಗಳ ಹೆಸರು ತೆಗೆದರೆ ದೊಡ್ಡಣ್ಣ ಬಾಲಿವುಡ್ನ ಖ್ಯಾತ ನಟ–ನಟಿಯರೂ ಹೆದರುತ್ತಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಎಂದರೆ ಸಾಕು ಬಾಲಿವುಡ್ನ ನಟ ಶಾರುಖ್ ಖಾನ್, ನಟಿ ದೀಪಿಕಾ ಪಡುಕೋಣೆ, ನಿರ್ಮಾಪಕ ಕರಣ್ ಜೋಹಾರ್, ಟಾಲಿವುಡ್ನ ನಟಿ ರಾಕುಲ್ ಪ್ರೀತ್ ಸಿಂಗ್, ನಟ ರಾಣಾ ದಗ್ಗುಬಾಟಿ, ನಟ ರವಿತೇಜ ಎಂಬಂತೆ ಹಲವು ಸ್ಟಾರ್ ನಟರಿಗೂ ಬಹಳ ಭಯ ಮತ್ತು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಭಯವನ್ನೇ ಬಂಡವಾಳ ಮಾಡಿಕೊಂಡ ಕೆಲವು ಕೀಡಿಗೇಡಿಗಳು ಭೋಜಪುರಿ ನಟಿಯೊಬ್ಬರನ್ನು ಬೆದರಿಸಿದ್ದು, ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸುದ್ದಿ ಸದ್ಯ ಚಿತ್ರರಂಗದಲ್ಲಿ ಎಲ್ಲರ ಆಘಾತಕ್ಕೆ ಕಾರಣವಾಗಿದೆ.
28 ವರ್ಷದ ಭೋಜಪುರಿ ನಟಿ ಮುಂಬೈನಲ್ಲಿ ನೆಲೆಸಿದ್ದು, ಡಿ.20 ರಂದು ತಮ್ಮ ಇಬ್ಬರು ಗೆಳೆಯರೊಟ್ಟಿಗೆ ಐಶಾರಾಮಿ ಹೋಟಲ್ ಒಂದಕ್ಕೆ ಪಾರ್ಟಿ ಮಾಡಲು ಹೋಗಿದ್ದರು. ಹೋಟೆಲ್ನಲ್ಲಿ ಗೆಳೆಯರೊಟ್ಟಿಗೆ ಇದ್ದ ನಟಿಯನ್ನು ಗಮನಿಸಿದ ಕೀಡಿಗೇಡಿಗಳು ಅವರನ್ನು ಡ್ರಗ್ಸ್ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದಾರೆ. ನಂತರ 40 ಲಕ್ಷ ಡಿಮ್ಯಾಂಡ್ ಮಾಡಿದ್ದಾರೆ. ಕೇಸ್ಗೆ ಹೆದರಿ ನಟಿ 20 ಲಕ್ಷ ಹಣ ನೀಡಿದ್ದಾರೆ. ಆದರೆ, ಉಳಿದ 20 ಲಕ್ಷಕ್ಕೆ, ನಟಿಗೆ ಆ ನಕಲಿ ಎನ್ಸಿಬಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಇದರಿಂದ ಹೆದರಿದ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ ನಂತರ ವಿಷಯ ಬೆಳಕಿಗೆ ಬಂದಿದೆ. ಇದೀಗ, ಇಬ್ಬರು ನಕಲಿ ಎನ್ಸಿಬಿ ಅಧಿಕಾರಿಗಳನ್ನು ಮತ್ತು ನಟಿಯ ಜೊತೆಗೆ ಪಾರ್ಟಿಗೆ ಹೋದ ಇಬ್ಬರು ಗೆಳೆಯರನ್ನು ಬಂಧಿಸಲಾಗಿದೆ. ನಟಿಯ ಗೆಳೆಯರು ಕೂಡ ನಕಲಿ ಎನ್ಸಿಬಿ ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದಾರೆ ಎಂಬ ಅನುಮಾನಗಳು ಕೇಳಿಬರುತ್ತಿವೆ.
ಮದುವೆಯಾಗಿ ತಿಂಗಳು ಕಳೆದಿಲ್ಲ, ಅಷ್ಟು ಬೇಗ ಬೇರೆ ನಟಿಯ ಜೊತೆ ವಿಕ್ಕಿ ಕೌಶಲ್ ಬೈಕ್ ರೈಡ್! ವಿಡಿಯೋ ವೈರಲ್…
ಖ್ಯಾತ ನಟಿಯ ಜೊತೆ ಕುಣಿದು ಕುಪ್ಪಳಿಸಿದ ಸಲ್ಮಾನ್ ಖಾನ್! ಧೂಳೆಬ್ಬಿಸಿದ ವಿಡಿಯೋ…
ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಜೀವನ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್!