ಭರಮಸಾಗರ: ಕರೊನಾ ತಡೆಗಟ್ಟಲು ಹಗಲಿರಳು ಶ್ರಮಿಸುತ್ತಿರುವ ಪೊಲೀಸರಿಗೆ ಕಾರ್ಮಿಕ ಹಕ್ಕುಗಳ ರಾಜ್ಯ ಕಾರ್ಯದರ್ಶಿ ನಂದೀಹಳ್ಳಿ ಟಿ.ಶರಣಪ್ಪ ಶನಿವಾರ ಮಾಸ್ಕ್ಗಳನ್ನು ವಿತರಿಸಿದರು.
ಪಿಎಸ್ಐ ರಾಜು ಮಾತನಾಡಿ, ಮಾಸ್ಕ್ ಉಚಿತವಾಗಿ ವಿತರಿಸುತ್ತಿರುವುದು ಸಂತೋಷ ವಿಚಾರ ಎಂದರು.
ಶರಣಪ್ಪ ಮಾತನಾಡಿ, ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಸೇವಕರಿಗೆ ಮಾಸ್ಕ್ಗಳನ್ನು ವಿತರಸಲಾಗುತ್ತಿದೆ. ಕರೊನಾ ಬಗ್ಗೆ ಪರಸ್ಪರ ತಿಳಿವಳಿಕೆ ಮೂಡಿಸಿಕೊಳ್ಳುವ ಮೂಲಕ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.